ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ತಿಳಿವಳಿಕೆಯುಳ್ಳ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿ ಹಾಡಿ ಹೊಗಳಿದ್ದಾರೆ.
ಮನಮೋಹನ್ ಸಿಂಗ್ ಅವರ ಬಗ್ಗೆ ಬ್ಲಾಗ್ನಲ್ಲಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಿಂಗ್ ಅವರು ಯಾವುದೇ ವಿಷಯದ ಬಗ್ಗೆ ಸದನದಲ್ಲಿ ಮಾತನಾಡುವಾಗ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡೆ ಮಾತನಾಡುತ್ತಿದ್ದರು. ಅಪಾರವಾದ ಜ್ಞಾನ ಹೊಂದಿರುವ ಸಿಂಗ್ ಸೋನಿಯಾಗಾಂಧಿ ಎದುರು ಮೌನವಾಗಿರುತ್ತಿದ್ದರು ಹಾಗೂ ಅವರ ಒತ್ತಡಕ್ಕೆ ಮಣಿದಿದ್ದರು ಎಂದು ಜೇಟ್ಲಿ ಬರೆದಿದ್ದಾರೆ.
ಫಲಿತಾಂಶದ ಬಳಿಕ ಸಿಂಗ್ ಅವರು ಗೌರವದಿಂದ ತಮ್ಮ ಹುದ್ದೆಗೆ ವಿದಾಯ ಹೇಳಲಿದ್ದಾರೆ. ಹತ್ತು ವರ್ಷಗಳ ಆಡಳಿತದಲ್ಲಿ ಸಿಂಗ್ ಅವರ ಮೇಲೆ ಯಾವುದೇ ಕಪ್ಪು ಚುಕ್ಕೆಗಳಿಲ್ಲ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.