ಜೆಡಿ(ಯು) ನಾಯಕ ಶರದ್ ಯಾದವ್, ‘ಅಪ್ರಾಮಾಣಿಕರಿಗೆ, ಅಯೋಗ್ಯರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದನ್ನು ಕೊನೆಗಾಣಿಸಬೇಕು’ ಎಂದು ಹೇಳಿ ‘ಪ್ರಶಸ್ತಿ’ಗಳ ವಿಶ್ವಾಸಾರ್ಹತೆಯ ಬಗೆಗೆ ಜನರ ಗಮನ ಸೆಳೆದಿದ್ದಾರೆ.
ಪದ್ಮ ಪ್ರಶಸ್ತಿಗಳಷ್ಟೇ ಅಲ್ಲ, ಸರ್ಕಾರ ಕೊಡಮಾಡುವ ಹಲವಾರು ಪ್ರಶಸ್ತಿಗಳನ್ನು ನೀಡುವ ಸಂದರ್ಭದಲ್ಲಿ ಮೊದಲು ಬಲಿಯಾಗುವುದು ವಸ್ತುನಿಷ್ಠತೆ! ಜನತಾ ಸರ್ಕಾರ, ಪದ್ಮ ಪ್ರಶಸ್ತಿ ಪ್ರದಾನವನ್ನು ನಿಲ್ಲಿಸಿತ್ತು! ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಪದ್ಮ ಪ್ರಶಸ್ತಿ ನೀಡಿಕೆಯಲ್ಲಿನ ‘ಅವ್ಯವಹಾರ’ಗಳ ಬಗ್ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದು ಪ್ರಸ್ತಾಪಿಸಿದ್ದರು.