ನಾದ ತರಂಗಿಣಿ ಸಂಗೀತ ಸಂಸ್ಥೆಯು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ವಾದಕ ಸಿ. ರಾಮದಾಸ್ ಅವರಿಗೆ ಸಂಸ್ಥೆಯ ಪ್ರಾಂಶುಪಾಲ ಬಳ್ಳಾರಿ ಸುರೇಶ್ ಅವರು ‘ನಾದ ಕಲಾ ವಾರಿಧಿ’ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಕಲಾವಿದ ಎಂ.ಎ. ಜಯರಾಮ ರಾವ್, ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್. ಸತ್ಯಪ್ರಕಾಶ್ ಹಾಗೂ ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಚಿತ್ರದಲ್ಲಿದ್ದಾರೆ. -ಪ್ರಜಾವಾಣಿ ಚಿತ್ರ