ಶ್ರವಣಬೆಳಗೊಳದ ‘ಬಾಹುಬಲಿ ಪ್ರಾಕೃತ ವಿದ್ಯಾಪೀಠ’ದ ವತಿಯಿಂದ ಕೋಲ್ಕತ್ತದ ರಾಜಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿದ್ವಾಂಸ ಪ್ರೊ.ಎಸ್.ಆರ್.ಬ್ಯಾನರ್ಜಿ ಅವರಿಗೆ ‘ಪ್ರಾಕೃತ ಜ್ಞಾನಭಾರತಿ ಅಂತರರಾಷ್ಟ್ರೀಯ ಪ್ರಶಸ್ತಿ’ಯನ್ನು ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ಪ್ರದಾನ ಮಾಡಿದರು. ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಹಾಗೂ ಜೈನ ಸಮಾಜದ ಮುಖಂಡ ಇಂದ್ರ ಕುಮಾರ್ ಚಿತ್ರದಲ್ಲಿದ್ದಾರೆ. ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸ್ಥಾಪಿಸಿರುವ ಈ ಪ್ರಶಸ್ತಿ ₹2 ಲಕ್ಷ ನಗದು ಒಳಗೊಂಡಿದೆ.