ನವದೆಹಲಿ (ಪಿಟಿಐ): ವಿಮಾನ ನಿಲ್ದಾಣಗಳಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ಪತಿ ರಾಬರ್ಟ್ ವಾಧ್ರಾ ಅವರಿಗೆ ನೀಡಿರುವ ಸಾಮಾನ್ಯ ಭದ್ರತಾ ತಪಾಸಣೆಯ ವಿನಾಯಿತಿ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರ ಹೇಳಿದೆ.
ಮೀನುಗಾರರ ಬಂಧನ
ಚೆನ್ನೈ (ಪಿಟಿಐ): ಜಲ ಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಭಾರತದ 73 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಶನಿವಾರ ಬಂಧಿಸಿದೆ. ತಲೈಮನ್ನಾರ್ ತೀರದಲ್ಲಿ 41 ಮೀನುಗಾರರನ್ನು, ಹಾಗೂ ಡೆಲ್ಫ್ಟ್ ದ್ವೀಪದಲ್ಲಿ 32 ಮೀನುಗಾರರನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರಧಾನಿಗೆ ತಮಿಳನಾಡು ಸಿ.ಎಂ ಜಯಲಲಿತಾ ಪತ್ರ ಬರೆದಿದ್ದಾರೆ.