ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಪ್ರಿಯಾಂಕಾ ವಾಧ್ರಾ ಅವರಿಗೆ ಹೆಚ್ಚಿನ ಹೊಣೆ ನೀಡುವ ಕುರಿತ ಮಾತುಗಳು ಪಕ್ಷದೊಳಗಡೆ ಕೇಳಿ ಬರುತ್ತಿವೆ.
ಕಾಂಗ್ರೆಸ್ನ ಒಂದು ವರ್ಗದ ಮುಖಂಡರು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು, ಪ್ರಿಯಾಂಕಾಗೆ ಪಕ್ಷದಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ಹೆಚ್ಚಿನ ಬಲ ಬಂದಿದೆ.
ಮುಂದಿನ ದಿನಗಳಲ್ಲಿ ‘ಪ್ರಿಯಾಂಕಾ ಕರೆತನ್ನಿ’ ಅಭಿಯಾನವು ಇನ್ನಷ್ಟು ಶಕ್ತಿ ಪಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ನ ಹಲವು ಮುಖಂಡರು ಚುನಾವಣೆಗೆ ಮುನ್ನವೇ ಪಕ್ಷದಲ್ಲಿ ಪ್ರಿಯಾಂಕಾ ಅವರಿಗೆ ಹೆಚ್ಚಿನ ಹೊಣೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪ್ರಿಯಾಂಕಾ ಅವರು ಅಮೇಠಿ ಮತ್ತು ರಾಯ್ಬರೇಲಿ ಮಾತ್ರವಲ್ಲದೇ ಇತರ ಕಡೆಗಳಲ್ಲೂ ಪ್ರಚಾರ ಮಾಡಿದ್ದರೆ, ಚುನಾವಣಾ ಫಲಿತಾಂಶ ಬೇರೆಯದೇ ಆಗುತ್ತಿತ್ತು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಮಂತ್ರಿತ ಅನಿಲ್ ಶಾಸ್ತ್ರಿ ಹೇಳಿದ್ದಾರೆ.