ಪ್ಲಾಸ್ಟಿಕ್ ನಿಷೇಧ ಮಾಡದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ (ಪ್ರ.ವಾ.ನ.೧೯) ಬೀಸಿದ ಸುದ್ದಿಗೆ ಪ್ರತಿಕ್ರಿಯೆ. ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಪೆಡಂಭೂತದಂತೆ ಬೆಳೆದು ಪರಿಸರ ಮಾಲಿನ್ಯ ಸೃಷ್ಟಿ ಆಗಿರುವುದಕ್ಕೆ ಪ್ಲಾಸ್ಟಿಕ್ ಬಳಕೆಯೇ ಮುಖ್ಯ ಕಾರಣ. ನಗರ, ಪಟ್ಟಣ, ಹಳ್ಳಿಗಳಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವುದು ಸಾಮಾನ್ಯ ದೃಶ್ಯವಾಗಿದೆ.
ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅತ್ಯಗತ್ಯ. ಅದರಲ್ಲೂ ನಿತ್ಯ ಬಳಕೆಯಾಗುತ್ತಿರುವ ಪ್ಲಾಸ್ಟಿಕ್ ಕೈಚೀಲ, ಲೋಟ, ಟೇಬಲ್ ಹಾಸು, ಅರ್ಧ ಲೀಟರ್ ನೀರಿನ ಬಾಟಲುಗಳು ಸಭೆ-, ಸಮಾರಂಭಗಳಲ್ಲಿ ಹೆಚ್ಚೆಚ್ಚು ಬಳಕೆಯಾಗಿ, ಪ್ಲಾಸ್ಟಿಕ್ ಕಸ ಬೆಳೆಯುತ್ತಿದೆ. ರಾಜ್ಯ ಸರ್ಕಾರ ಪ್ಲಾಸ್ಟಿಕ್ ಕೈಚೀಲ, ಲೋಟ, ಟೇಬಲ್ ಹಾಸು ಈ ಪ್ಲಾಸ್ಟಿಕ್ ವಸ್ತುಗಳನ್ನು ತಯಾರಿಕೆ ಮತ್ತು ಮಾರಾಟ ನಿಷೇಧಿಸುವುದರ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಲಿ.
–ಪ್ರೊ.ಸಿ. ಸಿದ್ದರಾಜು ಆಲಕೆರೆ, ಮಂಡ್ಯ