ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು 2015–16ನೇ ಸಾಲಿನಲ್ಲಿ ₨1 ಲಕ್ಷ ಫೆಲೋಶಿಪ್ಗೆ ಕರೆದಿದ್ದ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂನ್ 15ರ ವರೆಗೆ ವಿಸ್ತರಿಸಿದೆ.
‘ಕನಕದಾಸರ ಕುರಿತು ನಾಟಕಗಳು: ಸಾಂಸ್ಕೃತಿಕ ಚಲನಶೀಲತೆ’, ‘ಕನಕದಾಸ ಮತ್ತು ಪಶುಪಾಲನಾ ಪರಂಪರೆ’ ಮತ್ತು ‘ವ್ಯಕ್ತಿತ್ವ ನಿರ್ಮಾ ಣದ ನೆಲೆಗಳು: ಕನಕ ಮತ್ತು ಕುವೆಂಪು’ ಅಧ್ಯಯನ ವಿಷಯ ಗಳಾಗಿವೆ. 12 ತಿಂಗಳ ಅವಧಿಯ ಈ ಅಧ್ಯಯನ ಯೋಜ ನೆಯ ಬಗ್ಗೆ ಆಸಕ್ತ ಸಂಶೋಧನಾ ರ್ಥಿಗಳು ವಿದ್ಯಾರ್ಹತೆ, ಸಂಶೋಧನೆ ಕುರಿತ ಅನುಭವ ಹಾಗೂ ಆಸಕ್ತಿಯ ಕ್ಷೇತ್ರಗಳನ್ನು ಒಳಗೊಂಡ ವಿವರ ಸಲ್ಲಿಸಬಹುದು.
ಮಾಹಿತಿಗೆ: 080–221 13147 ಅನ್ನು ಸಂಪರ್ಕಿಸಬಹುದು.