ಜಬಲ್ಪುರ (ಪಿಟಿಐ): ಫೇಸ್ಬುಕ್ನ ಮೂಲಕ ಆರಂಭವಾದ ಗೆಳೆತನ ಕೊಲೆಯಲ್ಲಿ ಅಂತ್ಯವಾದ ಘಟನೆ ಉತ್ತರ ಪ್ರದೇಶದ ಜಬಲ್ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶ ಮುಜಫ್ಫರ್ನಗರದ ವಿನೀತ್ ಸಿಂಗ್ (22) ಎಂಬಾತನಿಗೆ ಸುಳ್ಳು ವಿವರ ನೀಡಿ ಆತನ ಜತೆ ಸ್ನೇಹ ಬೆಳೆಸಿದ್ದ ಜ್ಯೋತಿ ಕೋರಿ (44) ಎಂಬುವವರನ್ನು ವಿನೀತ್ ಪಿಸ್ತೂಲ್ನಿಂದ ಗುಂಡಿಟ್ಟು ಕೊಲೆ ಮಾಡಿ, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಎರಡೂವರೆ ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಪರಿಚಯವಾದ ಜ್ಯೋತಿ ತನ್ನ ಭಾವಚಿತ್ರ, ವೈಯಕ್ತಿಕ ವಿವರಗಳನ್ನು ಮರೆ ಮಾಚಿ ವಿನೀತ್ ಜತೆ ಸ್ನೇಹ ಬೆಳೆಸಿದ್ದರು. ಮೊದಲ ಸಲದ ಭೇಟಿಗಾಗಿ ಏಪ್ರಿಲ್ 18ರಂದು ಜಬಲ್ಪುರಕ್ಕೆ ಬಂದಾಗ ಜ್ಯೋತಿಗೆ ವಿವಾಹವಾಗಿ ಮೂವರು ಮಕ್ಕಳಿರುವುದು ವಿನೀತ್ ಸಿಂಗ್ಗೆ ತಿಳಿದು ಬಂದಿದೆ. ನಂತರ ಇಬ್ಬರೂ ನರ್ಮದಾ ನದಿಯ ತೀರದ ಭೇಧ್ಘಾಟ್ ಪ್ರದೇಶಕ್ಕೆ ತೆರಳಿದ್ದಾರೆ. ಮೋಸ ಹೋದ ವಿನೀತ್ ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಜಬಲ್ಪುರ ಐಜಿಪಿ ಉಪೇಂದ್ರ ಜೈನ್ ತಿಳಿಸಿದ್ದಾರೆ.
ಫೇಸ್ಬುಕ್ನಲ್ಲಿ ವಿನೀತ್ ಸಿಂಗ್ನ ಪಿಸ್ತೂಲ್ ಹಿಡಿದುಕೊಂಡಿರುವ ಚಿತ್ರಗಳನ್ನು ಮೃತ ಜ್ಯೋತಿ ಲೈಕ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.