ಪಾಕಿಸ್ತಾನದ ಐಎಸ್ಐ ಪರವಾಗಿ ಗೂಢಚರ್ಯೆ ಮಾಡುತ್ತಿದ್ದ ಆರೋಪದ ಮೇಲೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಹೆಡ್ಕಾನ್ಸ್ಟೆಬಲ್ ಸೇರಿ ಐವರನ್ನು ಬಂಧಿಸಿರುವುದು ಶ್ಲಾಘನೀಯ.
ಭಾರತದ ಭದ್ರತಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇಂಥ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರು ಇನ್ಯಾರಾದರೂ ಇದ್ದರೆ ಅಂಥ ದೇಶದ್ರೋಹಿಗಳನ್ನು ಸರ್ಕಾರ ಕೂಡಲೇ ಪತ್ತೆ ಹಚ್ಚಿ ಗಲ್ಲಿಗೇರಿಸಬೇಕು. ಇದು ದೇಶದ್ರೋಹಿಗಳಿಗೆ ಪಾಠವಾಗಬೇಕು.