ಕಳೆದ ಕೆಲವು ದಶಕಗಳಿಂದ ಸಿಇಟಿ, ಕಾಮೆಡ್ ಕೆ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ಗಳಿಸಿದ ಬಹುತೇಕ ವಿದ್ಯಾರ್ಥಿಗಳ ಕನಸು, ವೈದ್ಯಕೀಯ ಇಲ್ಲವೇ ತಾಂತ್ರಿಕ ಶಿಕ್ಷಣ ಪಡೆಯುವುದೇ ಆಗಿರುತ್ತಿತ್ತು.
ಆದರೆ ಈ ವರ್ಷದ ಅನೇಕ ವಿದ್ಯಾರ್ಥಿಗಳು ಮೂಲ ವಿಜ್ಞಾನ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಇತ್ಯಾದಿ ಕ್ಷೇತ್ರಗಳತ್ತ ಆಸಕ್ತಿ ತೋರಿರುವುದು ಕಂಡುಬಂದಿದೆ.ಅಂತೂ ಕೇವಲ ಒಂದೇ ಕ್ಷೇತ್ರದತ್ತ ವಾಲುತ್ತಿದ್ದ ಯುವಜನರ ಮನಸ್ಸು ಭವಿಷ್ಯದ ಅಗತ್ಯಗಳನ್ನು ಪರಿಗಣಿಸುತ್ತಿರುವುದು ಶ್ಲಾಘನೀಯ. ಐಟಿ, ಬಿಟಿ, ವೈದ್ಯಕೀಯದ ಹೊರತಾಗಿಯೂ ಅನ್ಯ ಕ್ಷೇತ್ರಗಳು ಪ್ರಸಿದ್ಧಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆ.