ಮಳೆ ಇಲ್ಲದೆ ಕೆರೆ, ಕುಂಟೆಗಳಲ್ಲಿ ನೀರಿಲ್ಲ. ಜಾನುವಾರುಗಳು ನೀರು ಹಾಗೂ ಮೇವಿಗಾಗಿ ಪರದಾಡುವಂತಾಗಿದೆ. ಬರಗಾಲದಿಂದ ಜನರು ಸಹ ಕಂಗಾಲಾಗಿ ಗುಳೆ ಹೋಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ. ಮೇವಿಲ್ಲದೆ ಸಾಯುವಂತಹ ಪರಿಸ್ಥಿತಿ ಎದುರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ರಾವಸ್ಥೆಯಲ್ಲೇ ಇದ್ದಾರೆ ಎಂದು ಟೀಕಿಸಿದರು.
ಜಿಲ್ಲೆಯನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಗೋಶಾಲೆಗಳನ್ನು ತೆರೆಯಬೇಕು. ರೈತರ ಬೆಳೆ ವಿಮೆ ಯೋಜನೆ ಮಂಜೂರು ಮಾಡಬೇಕು. ರೈತರ ಅಕ್ರಮ, ಸಕ್ರಮ ವಿದ್ಯುತ್ ಯೋಜನೆಯನ್ನು ಕೈಬಿಟ್ಟು ಹಿಂದಿನಂತೆ ಟ್ರಾನ್ಸ್ಫಾರಂ ನೀಡಬೇಕು ಎಂದರು.
ಆಹಾರ ಪಡಿತರ ಚೀಟಿಗಳ ಲೋಪದೋಷ ಸರಿಪಡಿಸಬೇಕು. ಹಳ್ಳಿಯಲ್ಲೂ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು. ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು ಎಂದು ಮನವಿ ಪತ್ರವನ್ನು ತಹಶೀಲ್ದಾರ್ ಹನುಮಂತರೆಡ್ಡಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ರೈತ ಮುಖಂಡರಾದ ವೆಂಕಟಸುಬ್ಬಾರೆಡ್ಡಿ, ಆಂಜನೇಯರೆಡ್ಡಿ, ವೆಂಕಟಾಚಲಪತಿ, ಕೊಂಡಪ್ಪ, ರೆಡ್ಡಪ್ಪ, ನಾಗರಾಜು, ಹನುಮಂತಪ್ಪ, ಮುನಿವೆಂಕಟಪ್ಪ, ಗಿಡ್ಡೇಗೌಡ, ನರಸಿಂಹಮೂರ್ತಿ, ಕೆ.ಎಂ.ವೆಂಕಟೇಶಪ್ಪ, ಮಂಜುನಾಥ್, ಬಿ.ಎಂ.ಮುನಿವೆಂಕಟಪ್ಪ, ವೈ.ವಿ.ಶಂಕರರೆಡ್ಡಿ ಮತ್ತಿತರರು ಭಾಗವಹಿಸಿದ್ದರು.