ಬ್ರಹ್ಮಾವರ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು ಪಡೆದಾಗ ಆ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ಜಿ.ಪಿ ಪ್ರಭಾಕರ ಹೇಳಿದರು.
ಬಾರ್ಕೂರು ಮೂಡುಕೇರಿ ವೇಣು ಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿ ವತಿಯಿಂದ ವೇಣುಗೋ ಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು. ಮಟಪಾಡಿಯ ರಮೇಶ ಗಾಣಿಗ ನೂತನ ವೆಬ್ಸೈಟ್ನ್ನು ಉದ್ಘಾಟಿಸಿ ದರು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ೧೧೨ ವಿದ್ಯಾರ್ಥಿಗಳಿಗೆ ಸುಮಾರು ೫ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉದ್ಯಮಿ ರಾಜೇಂದ್ರ ಗಾಣಿಗ, ಡಾ.ರಾಮದಾಸ್, ವೇಣುಗೋಪಾಲ ಕೃಷ್ಣ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷ ಎಚ್.ಕೆ ಅಚ್ಯುತ್ ರಾವ್, ಸಾಲಿಗ್ರಾಮ ಗೋಪಾಲ ಮಾಸ್ತರ್, ಸ್ಮಿತಾ ಭದ್ರಾ ವತಿ, ಕೋಶಾಧಿಕಾರಿ ಎಸ್.ಕೆ ಪ್ರಾಣೇಶ, ಸದಸ್ಯರಾದ ಎಚ್.ನಾರಾಯಣ, ಸೂರ್ಯನಾರಾಯಣ ಗಾಣಿಗ ಮಟ ಪಾಡಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಿ.ಗಣೇಶ, ಸ್ವಾತಿ ಇದ್ದರು.