ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದಲ್ಲೇ ಬೆಳ್ಳಿಗೆರೆ

Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ನೀವೆಷ್ಟು ಗಂಟೆ ನಿದ್ದೆ ಮಾಡುತ್ತೀರಿ? ಏನುಣ್ಣುತ್ತೀರಿ? ಎಷ್ಟು ಗಂಟೆಗೆ ಎದ್ದೇಳುತ್ತೀರಿ? ಇವೆಲ್ಲಕ್ಕೂ ಉತ್ತರ ಕೊಡುತ್ತಲೇ ಒಮ್ಮೆ ತಲೆಯನ್ನು ಗಮನಿಸಿ, ಅಲ್ಲಲ್ಲಿ ಬೆಳ್ಳಿಗೆರೆ ಇಣುಕಿದೆಯೇ?

ಸಾಮಾನ್ಯವಾಗಿ ಮುಂದಲೆಯಲ್ಲಿಯೇ ಮೊದಲು ಇಣುಕುವ ಈ ಬಿಳಿ ಕೂದಲಿಗೂ ನಮ್ಮ ಜೀವನಶೈಲಿಗೂ ನೇರ ನಂಟಿದೆ. ಇದನ್ನು ಬೆಂಗಳೂರಿನ ಹೇರ್‌ಲೈನ್‌ ಸ್ಟುಡಿಯೊದ ಅಧ್ಯಯನ ಸಾಬೀತು ಪಡಿಸಿದೆ. ಕಳೆದ ವರ್ಷ ಅವರ ಬಳಿ ಬಾಲನೆರೆ ಮತ್ತು ಅಕಾಲ ನೆರೆಯ ಸಮಸ್ಯೆಯ ಚಿಕಿತ್ಸೆಗೆ ಬಂದವರನ್ನು ಅಧ್ಯಯನಕ್ಕೆ ಒಳಪಡಿಸಿದರು. ದಟ್ಟವಾದ, ಕಪ್ಪು ಕಾಂತಿಯುತ ಕೂದಲು ಎಲ್ಲರ ಕನಸಾಗಿತ್ತು.
ಆನುವಂಶೀಯ ಕಾರಣವಿಲ್ಲದಿದ್ದಲ್ಲಿ ಕೂದಲು ಬೆಳ್ಳಗಾಗಲು ಜೀವನಶೈಲಿಯೇ ನೇರ ಕಾರಣ ಎನ್ನುವುದು ಡಾ.ಸ್ವಾಗತಾ ಚಕ್ರವರ್ತಿ ಅವರ ಅಧ್ಯಯನದ ಫಲಿತಾಂಶ ಹೇಳುತ್ತದೆ.

ಇವರ ಅಧ್ಯಯನದ ಫಲಿತಾಂಶಗಳ ಪ್ರಕಾರ ಶೇ. 98ರಷ್ಟು ಜನರಲ್ಲಿ ವಿಟಮಿನ್‌ ಡಿ ಕೊರತೆ ಕಂಡು ಬಂದಿತ್ತು. ಶೇ 85ರಷ್ಟು ಜನರಲ್ಲಿ ಕಬ್ಬಿಣದ ಅಂಶದ ಕೊರತೆ ಕಂಡು ಬಂದಿತು. ಅರ್ಧಕ್ಕಿಂತ ಹೆಚ್ಚು ಜನರಲ್ಲಿ ಕ್ಯಾಲ್ಶಿಯಂ ಕೊರತೆ ಇದ್ದರೆ ಶೇ. 13ರಷ್ಟು ಜನರು ಸ್ಥೂಲಕಾಯದವರಾಗಿದ್ದರು. ಸಮಸ್ಯೆಗೆ ಕಾರಣ ತಿಳಿದ ಮೇಲೆ, ಪರಿಹಾರ ಹುಡುಕುವುದೂ ಕಷ್ಟವಾಗಿರಲಿಲ್ಲ. ಅವರ ಜೀವನಶೈಲಿಯನ್ನು ಸುಧಾರಿಸುವುದು ಮೊದಲ ಸವಾಲಾಗಿತ್ತು. ಸಮತೋಲನ ಆಹಾರ ಸೇವನೆಯ ಬಗ್ಗೆ ಹೆಚ್ಚು ಮಾಹಿತಿ ನೀಡಲಾಯಿತು. ಸ್ವಾಸ್ಥ್ಯಮಯ ಕೂದಲು ಮಾತ್ರ ಸುಂದರ ಕಾಣಬಹುದು.

ಕೂದಲಿನ ಆರೋಗ್ಯಕ್ಕೆ ಅವರ ಒತ್ತಡದ ಜೀವನವನ್ನು ಸರಿಪಡಿಸಲು ಸೂಕ್ತ ಸಲಹೆಗಳನ್ನು ನೀಡಲಾಯಿತು. ನಿಗದಿತ ಸಮಯದಲ್ಲಿ ನಿಯಮಿತವಾಗಿ ನಿದ್ದೆ ಮಾಡುವುದು. ಸಮತೋಲಿತ ಆಹಾರ ಸ್ವೀಕರಿಸುವುದು ತಲೆ, ಬುರುಡೆ ಹಾಗೂ ಕೂದಲನ್ನು ಸ್ವಚ್ಛವಾಗಿರಿಸುವುದು.

ಕೂದಲಿಗಾಗಿ ವಿಶೇಷ ತೈಲ ನೀಡಲಾಯಿತು. ಪೌಷ್ಟಿಕಾಂಶದ ಕೊರತೆ ನೀಗಿಸಲು ಪೂರಕ ಮಾತ್ರೆಗಳನ್ನು ನೀಡಲಾಯಿತು.
ಪೂರಕ ಮಾತ್ರೆಯಲ್ಲಿ ಬೇವು, ನೆಲ್ಲಿಕಾಯಿ, ಎಕ್ಲಿಪ್ತಾ ಆಲ್ಬಾದಂಥ ಗಿಡಮೂಲಿಕೆಗಳ ಮೂಲಕ ಕೂದಲ ಬುಡವನ್ನು ಭದ್ರಗೊಳಿಸಲು ಕ್ರಮಕೈಗೊಳ್ಳಲಾಯಿತು.

ಸೆಲೆನಿಯಂ, ಜಿಂಕ್‌, ಬಯೋಟಿನ್‌, ವಿಟಮಿನ್‌ ಬಿ ಕಾಂಪ್ಲೆಕ್ಸ್‌, ಫಾಲಿಕ್ ಆಸಿಡ್‌ ಮುಂತಾದ ಅಂಶಗಳನ್ನೂ ಈ ಮಾತ್ರೆ ಒಳಗೊಂಡಿದ್ದು, ಮಾತ್ರೆಗಳ ಸೇವನೆಯಿಂದ ಪೌಷ್ಟಿಕಾಂಶ ಕೊರತೆಯನ್ನು ನೀಗಿಸಲಾಯಿತು.

ಕಳೆದ ಎಂಟು ತಿಂಗಳಿಂದ ಈ ಮಾತ್ರೆಗಳ ಸೇವನೆ ಹಾಗೂ ಜೀವನಶೈಲಿಯಲ್ಲಿಯ ಬದಲಾವಣೆಯಿಂದಾಗಿ ರೋಗಿಗಳಲ್ಲಿ ಶೇ 40ರಷ್ಟು ಜನರಲ್ಲಿ ಅಕಾಲಿಕ ನೆರೆ ನಿಗ್ರಹಕ್ಕೆ ಬಂದಿದೆ ಎನ್ನುವುದನ್ನು ಅವರು ಅಂಕಿ ಅಂಶಗಳ ಮೂಲಕ ತೋರಿಸುತ್ತಾರೆ. ವಿರಳಾತೀವಿರಳ ಎಂಬಂತೆ, ಕೆಲವರಲ್ಲಿ ಬಿಳಿಯಾಗಿದ್ದ ಕೂದಲು ಕಪ್ಪು ಬಣ್ಣಕ್ಕೆ ಬದಲಾಗುತ್ತಿರುವುದೂ ಕಂಡು ಬಂದಿದೆ.

ಅಕಾಲ ನೆರೆಗೆ ಚಿಕಿತ್ಸೆ ಇದೆ. ಪೂರಕ ಮಾತ್ರೆ ಸೇವನೆ, ತೈಲ ಲೇಪನ ಹಾಗೂ ಜೀವನಶೈಲಿಯ ಬದಲಾವಣೆಯಿಂದಾಗಿ ಆರೋಗ್ಯವಂತ ಕೂದಲನ್ನು ಪಡೆಯಬಹುದಾಗಿದೆ. ಈ ಪೂರಕ ಮಾತ್ರೆ ಸೇವನೆ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ: 080 23551177​, 235511​88​

ಬಾಲನೆರೆ ತಡೆಯಬೇಕೆಂದರೆ...

*ಊಟದಲ್ಲಿ ನಾರಿನಂಶ ಇರಲಿ, ವಿಟಮಿನ್‌ ಡಿ ಕೊರತೆಯಾಗದಿರಲಿ, ಎಳೆ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದು ಹಿತ, ತಲೆ ಸ್ವಚ್ಛ ಮತ್ತು ಶುಭ್ರವಾಗಿರಿಸಿಕೊಳ್ಳಬೇಕು, ಸಾಧ್ಯವಿದ್ದಷ್ಟು ಮೈಲ್ಡ್‌ ಶಾಂಪೂ ಬಳಸಿ, ಒತ್ತಡ ಮುಕ್ತ ಜೀವನವನ್ನು ಕಳೆಯಬೇಕು. ಕೂದಲಿಗೆ ಪೋಷಕಾಂಶಗಳು    ದೊರೆಯುವಂತೆ ಸೊಪ್ಪು, ತರಕಾರಿ ಹಣ್ಣುಗಳನ್ನು ಹೇರಳವಾಗಿ ಸೇವಿಸಬೇಕು.

*ಕೇಶ ವಿನ್ಯಾಸಕ್ಕಾಗಿ ಕೂದಲನ್ನು ಆಗಾಗ ಗುಂಗುರುಗೊಳಿಸುವುದು, ನೇರ ಗೊಳಿಸುವುದು ಮುಂತಾದವುಗಳನ್ನು ಮಾಡುವುದು ಸಲ್ಲ. ಕೂದಲು ನೈಸರ್ಗಿಕವಾಗಿದ್ದಷ್ಟೂ ಆರೋಗ್ಯದಿಂದಿರುತ್ತವೆ. ಆರೋಗ್ಯ ಪೂರ್ಣವಾಗಿದ್ದಷ್ಟೂ ಚಂದ ಕಾಣಿಸುತ್ತವೆ, ಕೃತಕ ಬಣ್ಣಗಳ ಬದಲು ಮೆಹೆಂದಿ ಬಳಕೆ ಒಳಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT