ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷ ಶಿವಕುಮಾರ ಗೌಡ ಶೆಟ್ಟಿ ಅವರ ನೇಮಕ ಆದೇಶಕ್ಕೆ ತಡೆ ನೀಡಲಾಗಿದೆ.
ಪಕ್ಷದ ಮುಖಂಡರು, ಕಾರ್ಯಕರ್ತರಿಂದ ತೀವ್ರ ವಿರೋಧ ಬಂದ ಕಾರಣ ಸಿದ್ದರಾಮಯ್ಯ ಅವರು ಶೆಟ್ಟಿ ನೇಮಕಕ್ಕೆ ಮಂಗಳವಾರ ತಡೆ ನೀಡಿದರು.
ಕೆಜೆಪಿ ಸೇರಿದ್ದ ಅವರು ಇತ್ತೀಚೆಗೆ ಕಾಂಗ್ರೆಸ್ಗೆ ವಾಪಸ್ಸಾಗಿದ್ದರು. ಈ ವಿಷಯ ತಿಳಿಸಿದ ನಂತರ ನೇಮಕಾತಿ ಆದೇಶಕ್ಕೆ ತಡೆ ನೀಡಿದರು ಎಂದು ಗೊತ್ತಾಗಿದೆ.