‘ಗುರುವಾರದಿಂದ ಶನಿವಾರದವರೆಗೆ ಲಲಿತ್ ಅಶೋಕ ಹೋಟೆಲ್ ಬಳಿ ಮತ್ತು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಗಳನ್ನು ಹಾಕಲು ಪಾಲಿಕೆ ಆಯುಕ್ತರು ಬಿಜೆಪಿಗೆ ಅನುಮತಿ ನೀಡಿದ್ದಾರೆ ಎಂದು ಪಾಲಿಕೆಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರು ತಿಳಿಸಿದ್ದಾರೆ. 30 ಕಿ.ಮೀ ವ್ಯಾಪ್ತಿ ಎಂದರೆ ಇಡೀ ನಗರವೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಬಿಜೆಪಿಯವರ ಕಾರ್ಯಕ್ರಮ ಮುಗಿದ ನಂತರ, ಆ ಬಂಟಿಂಗ್ಗಳನ್ನು ವಿಲೇವಾರಿ ಮಾಡಲು ಅದರಿಂದ ತೆರಿಗೆ ರೂಪದಲ್ಲಿ ಬರುವುದಕ್ಕಿಂತ ಹೆಚ್ಚು ಹಣ ಬೇಕು’ ಎಂದು ನ್ಯಾಯಮೂರ್ತಿ ಅಡಿ ಹೇಳಿದ್ದಾರೆ.
ಬಂಟಿಂಗ್ಗಳನ್ನು ಎಲ್ಲಿ ಹಾಕಲಾಗುವುದು ಎಂಬುದನ್ನು ಆಯುಕ್ತರು ನೀಡಿದ ಅನುಮತಿ ಪತ್ರದಲ್ಲಿ ಸ್ಪಷ್ಟಪಡಿಸಿಲ್ಲ ಎಂದು ಅಡಿ ತಿಳಿಸಿದರು.
ಪ್ಲಾಸ್ಟಿಕ್ ಬಂಟಿಂಗ್ ಹಾಕಲು ಅನುಮತಿ ನೀಡಿರುವುದು ಪ್ರಧಾನಿಅವರ ಸ್ವಚ್ಛ ಭಾರತ ಅಭಿಯಾನದ ಆಶಯಕ್ಕೆ ವಿರುದ್ಧವಾಗಿದೆ
ಸುಭಾಷ್ ಬಿ. ಅಡಿ, ಉಪ ಲೋಕಾಯುಕ್ತ