ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಗಮನಿಸಲಿ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಉಲ್ಲಾಳು ಮುಖ್ಯ ರಸ್ತೆ, 9ನೇ ಅಡ್ಡರಸ್ತೆ (ಅಭಯ ಆಸ್ಪತ್ರೆ ದಾರಿ) ಮನೆ ಸಂಖ್ಯೆ 77ರ ಎಡಬದಿಗೆ ರಸ್ತೆ ಕವಲೊಡೆದು ಮುಂದುವರಿದ ರಸ್ತೆ ಬಲಬದಿಗೆ ತಿರುವು ಪಡೆದುಕೊಂಡಿದೆ. ಈ ರಸ್ತೆ ಮನೆ ಮುಂಭಾಗದ ಗೇಟಿಗಿಂತಲೂ ಎತ್ತರದಲ್ಲಿದ್ದು, ಜೋರಾಗಿ ಮಳೆ ಬಂದರೆ ನೀರು ಮನೆಯೊಳಗೆ ನುಗ್ಗುವ ಭಯ ಇದೆ. 

ಪ್ರತಿದಿನ ಮಳೆ ಬಂದರೂ ಇಲ್ಲಿನ ನಿವಾಸಿಗಳಿಗೆ ನೀರು ನುಗ್ಗುತ್ತದೆಂಬ ಭಯ. ಈಗಲಾದರೂ ಬಿಬಿಎಂಪಿ ಇಲ್ಲಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಎತ್ತರದಲ್ಲಿರುವ (ಮನೆಯ ಮಟ್ಟಕ್ಕಿಂತ) ರಸ್ತೆಯನ್ನು ತಗ್ಗು ಮಾಡಲಿ ಹಾಗೂ ಚರಂಡಿಯಲ್ಲಿ ಮಳೆನೀರು ಸರಾಗವಾಗಿ ಹೋಗುವಂತೆ ಮಾಡಲೆಂದು ಕೋರಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT