ಬೆಂಗಳೂರು: ಗುರುವಾರ ನಡೆಯ ಬೇಕಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಸಭೆಯನ್ನು ಗಿರಿನಗರ ವಾರ್ಡ್ ಸದಸ್ಯೆಯಾಗಿದ್ದ ಎಚ್.ಎಸ್. ಲಲಿತಾ ಅವರು ನಿಧನ ಹೊಂದಿದ್ದರಿಂದ ಶುಕ್ರವಾರಕ್ಕೆ ಮುಂದೂಡಲಾಯಿತು.
ಲಲಿತಾ ಅವರು ಬುಧವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಚಾಮರಾಜಪೇಟೆ ಸ್ಮಶಾನದಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಯಿತು.
ಶಾಸಕರಾದ ಆರ್. ಅಶೋಕ, ರವಿ ಸುಬ್ರಹ್ಮಣ್ಯ, ಮೇಯರ್ ಎನ್. ಶಾಂತಕುಮಾರಿ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಹಾಗೂ 80ಕ್ಕೂ ಅಧಿಕ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು. ಬಿಬಿಎಂಪಿ ಯಿಂದ ಲಲಿತಾ ಕುಟುಂಬಕ್ಕೆ ₨ 10 ಲಕ್ಷ ಮೊತ್ತದ ಚೆಕ್ ನೀಡಲಾಯಿತು. ಅವರ ಗೌರವಾರ್ಥ ಪಾಲಿಕೆ ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು.