ಮಂಡಿ (ಪಿಟಿಐ): ಬಿಯಾಸ್ ನದಿ ದುರಂತದಲ್ಲಿ ಮೃತಪಟ್ಟ ಹೈದರಾ ಬಾದ್ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಶವ ಭಾನು ವಾರ ಪತ್ತೆಯಾಗಿದೆ. ಈವರೆಗೆ 16 ಮೃತದೇಹಗಳು ಪತ್ತೆಯಾಗಿವೆ.
ರಕ್ಷಣಾ ಕಾರ್ಯಾಚರಣೆ ತಂಡ ಈ ಮೃತದೇಹಗಳನ್ನು ಪತ್ತೆಹಚ್ಚಿದೆ ಎಂದು ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಎಸ್.ನೇಗಿ ಹೇಳಿದ್ದಾರೆ. ಮೃತದೇಹಗಳ ಪತ್ತೆಗೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದಕ್ಕಾಗಿ 600 ರಕ್ಷಣಾ ಕಾರ್ಯಾ ಚರಣೆ ಸಿಬ್ಬಂದಿ, ಸೇನಾ ಸಿಬ್ಬಂದಿ, ಪೊಲೀಸರು, ಐಟಿಬಿಪಿ ಯೋಧರು ಮತ್ತು 40 ಮುಳುಗುತಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ. ಜೂ.8 ರಂದು ಬಿಯಾಸ್ ನದಿಯಲ್ಲಿ ಹೈದರಾಬಾದ್ನ ವಿಜ್ಞಾನ ಜ್ಯೋತಿ ಎಂಜಿನಿಯರಿಂಗ್ ಕಾಲೇಜಿನ 24 ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದರು.