ನಗರದ ಜನತೆ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಬಾಲಕ ತಣ್ಣೀರಿನ ಮಜ್ಜನದ ಮೊರೆಹೋಗಿದ್ದಾನೆ. ಬಾಯಾರಿದ ಮಂಗ ಖಾಲಿ ಲೋಟ ಹಿಡಿದು ಹನಿ ನೀರಿಗಾಗಿ ಪರಿತಪಿಸುತ್ತಿದೆ, ಹೊಟ್ಟೆಪಾಡಿಗಾಗಿ ಬುಟ್ಟಿ ಹೆಣೆಯುವ ಮಹಿಳೆಯೂ ಛತ್ರಿಯ ಮೊರೆಹೋಗಿದ್ದಾಳೆ.