ಬಿಹಾರ ಚುನಾವಣೆಗಾಗಿ ಜೆಡಿಯು, ಆರ್ಜೆಡಿ ಜತೆಗೆ ಕಾಂಗ್ರೆಸ್ ಕೈಜೋಡಿಸಿದೆ. ಬಿಹಾರವನ್ನು 60 ವರ್ಷ ಆಳಿದ ಇವರು ಒಂದೇ ಒಂದು ಉದ್ಯೋಗಾವಕಾಶ ಸೃಷ್ಟಿಸಿಲ್ಲ. ಬಿಹಾರಕ್ಕಾಗಿ ಏನೂ ಮಾಡಲು ಸಾಧ್ಯವಾಗದ ಇವರು ಈಗ ನನ್ನನ್ನು ಬೈಯುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಅವರು ಶುಕ್ರವಾರ ಸಸಾರಾಂ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.
‘ಲಾಲೂ, ನಿತೀಶ್ ಮತ್ತು ಸೋನಿಯಾಗಾಂಧಿ ಪ್ರತಿ ದಿನ ಬೆಳಿಗ್ಗೆ ಎದ್ದು ನಿಘಂಟು ತೆಗೆದು ನನ್ನನ್ನು ಬೈಯಲು ಕೆಟ್ಟ ಕೆಟ್ಟ ಪದಗಳನ್ನು ಹುಡುಕುತ್ತಿದ್ದಾರೆ. ಈಗ ನಿಘಂಟುವಿನಲ್ಲಿರುವ ಪದಗಳೆಲ್ಲಾ ಮುಗಿದು ಹೋಗಿದ್ದು, ಬೈಗುಳಕ್ಕಾಗಿ ಹೊಸ ಫ್ಯಾಕ್ಟರಿಯನ್ನೇ ಪ್ರಾರಂಭಿಸಲಾಗಿದೆ ಎಂದು ವ್ಯಂಗ್ಯವಾಡಿದರು.
ಲಾಲೂ ಆಡಳಿತವನ್ನು ‘ಜಂಗಲ್ ರಾಜ್’ಎಂದು ಕರೆದಿದ್ದ ನಿತೀಶ್ ಅವರು ಈಗ ಸುಮ್ಮನಿದ್ದಾರೆ. ಮಾಂಝಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ನಿತೀಶ್ ಅವರು ದಲಿತರ ಬೆನ್ನಿಗೆ ಚೂರಿ ಹಾಕಿದರು ಎಂದು ಮೋದಿ ಹೇಳಿದರು.