ವೆಸ್ಟ್ ಇಂಡೀಸ್ ಸರಣಿಯ ಮೊದಲ ಟೆಸ್ಟ್ ನಲ್ಲಿ ಭಾರತ ಭರ್ಜರಿ ಜಯಗಳಿಸಿತ್ತು. ಜುಲೈ 30ರಂದು ಇಲ್ಲಿ ಎರಡನೇ ಟೆಸ್ಟ್ ಆಡಲಿದೆ. ಅದಕ್ಕಾಗಿ ಅಭ್ಯಾಸ ಆರಂಭಿಸಿತು.
ವೃದ್ಧಿಮಾನ್ ಸಹಾ ಅವರು ವಿಕೆಟ್ ಕೀಪಿಂಗ್ ಅಭ್ಯಾಸದಲ್ಲಿ ತೊಡಗಿದ್ದರು. ಡೈವಿಂಗ್, ಕ್ಯಾಚಿಂಗ್ ಮತ್ತು ಸ್ಟಂಪಿಂಗ್ ಗಳನ್ನು ಮಾಡುವ ಅಭ್ಯಾಸ ನಡೆಸಿದರು.
ಆ್ಯಂಟಿಗಾ ಟೆಸ್ಟ್ನಲ್ಲಿ ಕೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಮುರಳಿ ವಿಜಯ್ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಹೆಚ್ಚು ಕಠಿಣ ಅಭ್ಯಾಸ ಮಾಡುವ ಬದಲಿಗೆ ಲಘು ವ್ಯಾಯಾಮಗಳನ್ನು ಮಾಡಿದರು.
ಆದರೆ, ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಮಾತ್ರ ನೆಟ್ಸ್ನಲ್ಲಿ ಸಿಕ್ಸರ್ಗಳನ್ನು ಸಿಡಿಸುವಲ್ಲಿ ತಲ್ಲೀನರಾಗಿದ್ದರು. ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮ ಪಾಲು ದಾರಿಕೆ ಆಟವಾಡಿದ್ದರು. ಒಂದು ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸಿದರು.