ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ಯೆ ವಿಳಂಬ ಸಲ್ಲದು

ಅಕ್ಷರ ಗಾತ್ರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದು ಒಂದು ವಾರ ಕಳೆದರೂ ಇನ್ನೂ ಮೌಲ್ಯಮಾಪಕರಿಗೆ ಬರಬೇಕಾದ ಭತ್ಯೆ ಬಂದಿಲ್ಲ. ಪ್ರತಿ ವರ್ಷ ಕೊನೆಯ ದಿನದಂದೆ ಚೆಕ್‌ ವಿತರಿಸುತ್ತಿದ್ದರು. ಈ ವರ್ಷ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದು ಖಾತೆ ಸಂಖ್ಯೆ ಪಡೆದಿದ್ದಾರೆ.

ಯಾವಾಗ ಹಣ ಬರುವುದೋ ಎಂಬ ಚಿಂತೆ ಅನುದಾನ ರಹಿತ, ಅನುದಾನಿತ ಶಾಲೆಯ ಶಿಕ್ಷಕರದ್ದಾಗಿದೆ.  ಅವರ ವೇತನವೂ ತಿಂಗಳಿಗೆ ಸರಿಯಾಗಿ ಆಗುವುದಿಲ್ಲ. ಈ ಹಣ ಬರುವುದೂ ವಿಳಂಬವಾಗಿದೆ. ಪ್ರೌಢ ಶಿಕ್ಷಣ ಮಂಡಳಿ ಶಿಕ್ಷಕರ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಬಿಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT