ಹೈದರಾಬಾದ್ (ಪಿಟಿಐ): ಪರಸ್ಪರ ಹೊಂದಾಣಿಕೆಯ ಬಂಡವಾಳ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಗೊಲೆ ಸಂಸದ ವೈ.ವಿ. ಸುಬ್ಬಾರೆಡ್ಡಿ, ಐಎಎಸ್ ಅಧಿಕಾರಿ ಎಸ್.ಎನ್. ಮೊಹಂತಿ ಮತ್ತು ಇತರರು ಶುಕ್ರವಾರ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರಾದರು.
ಇಂದೂ–ಆಂಧ್ರಪ್ರದೇಶ ವಸತಿ ಮಂಡಳಿಯ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ 11ನೇ ದೋಷಾರೋಪಟ್ಟಿಯನ್ನು ಪರಿಗಣಿಸಿ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತ್ತು.
ವೈ.ವಿ. ಸುಬ್ಬಾರೆಡ್ಡಿ, ಎಸ್.ಎನ್. ಮೊಹಂತಿ ಅವರಲ್ಲದೆ, ಜಗನ್ ಮೋಹನ್ ರೆಡ್ಡಿ ಅವರ ಹಣಕಾಸು ಸಲಹೆಗಾರ ವಿಜಯ್ ಸಾಯಿ ರೆಡ್ಡಿ, ಕೈಗಾರಿಕೋದ್ಯಮಿ ಐ. ಶಾಂಪ್ರಸಾದ್ ಹಾಗೂ ಕೆಲವು ಕಂಪೆನಿಗಳ ಪ್ರತಿನಿಧಿಗಳು ನ್ಯಾಯಾಲಯಕ್ಕೆ ಹಾಜರಾಗಿ ₨25 ಸಾವಿರಗಳ ಭದ್ರತಾ ಠೇವಣಿ ಮತ್ತು ಇಬ್ಬರು ವ್ಯಕ್ತಿಗಳ ಭದ್ರತೆಒದಗಿಸಿ ಜಾಮೀನು ಪಡೆದಿದ್ದಾರೆ. ಜಗನ್ಮೋಹನ್ ರೆಡ್ಡಿ ಸೇರಿದಂತೆ ಒಟ್ಟು 14 ಜನರನ್ನು 11ನೇ ದೋಷಾರೋಪ ಪಟ್ಟಿಯಲ್ಲಿ ಆಪಾದಿತರು ಎಂದು ಸೇರಿಸಲಾಗಿದೆ.