ರಶ್ಮಿ ಮಹೇಶ್ ಒಬ್ಬ ದಕ್ಷ ಐಎಎಸ್ ಅಧಿಕಾರಿ. ತಾವು ಕಾರ್ಯ ನಿರ್ವಹಿಸಿದ ವಿವಿಧ ಕ್ಷೇತ್ರಗಳಲ್ಲಿ ಅವ್ಯವಹಾರಗಳನ್ನು ಬಯಲಿಗೆಳೆದವರು. ಇಂತಹ ಅಧಿಕಾರಿ ಮೇಲೆ ಇತ್ತೀಚೆಗೆ ಹಲ್ಲೆ ನಡೆದಿರುವುದು ಅಮಾನವೀಯ. ಈ ಬಗ್ಗೆ ಹೆಚ್ಚಿನವರು ಮೌನ ವಹಿಸಿರುವುದು ಸರಿಯಲ್ಲ.
ಎ.ಟಿ.ಐ.ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿರುವುದನ್ನು ನೋಡಿದರೆ, ಕೋಟ್ಯಂತರ ರೂಪಾಯಿ ಯಾವ ರೀತಿ ಸೋರಿ ಹೋಗುತ್ತಿದೆ ಎಂಬುದನ್ನು ಸಾಮಾನ್ಯ ಪ್ರಜೆಯೂ ಅರ್ಥ ಮಾಡಿಕೊಳ್ಳಬಹುದು. ಇಂತಹ ಭ್ರಷ್ಟಾಚಾರ ಬರೀ ಎ.ಟಿ.ಐ.ನಲ್ಲಿ ಮಾತ್ರವಲ್ಲ, ಎಲ್ಲಾ ಇಲಾಖೆಗಳಲ್ಲೂ ನಡೆಯುತ್ತಿದೆ. ಸರ್ಕಾರ ಇಂಥ ಅಧಿಕಾರಿಯ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು.