119 ಸದಸ್ಯರು ಒಮ್ಮತದಿಂದ ಮಧುಸೂಧನಾಚಾರಿ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆರಿಸಿದರು. ಬಳಿಕ ಹಂಗಾಮಿ ಸಭಾಧ್ಯಕ್ಷ ಕೆ. ಜನರೆಡ್ಡಿ ಅವರು ಮಧುಸೂಧನಾಚಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ಪ್ರತಿಪಕ್ಷದ ಮುಖಂಡರು ಮಧುಸೂಧನಾಚಾರಿ ಅವರನ್ನು ಅಭಿನಂದಿಸಿದರು.