ನಗರದ ಮಲ್ಲೇಶ್ವರದಲ್ಲಿ ಇತ್ತೀಚಿಗೆ ‘ಹೋಮಿಯೊ ಕೇರ್’ ಮಕ್ಕಳ ಹೋಮಿಯೊಪತಿ ಚಿಕಿತ್ಸಾಲಯದ ಉದ್ಘಾಟನೆ ನೆರವೇರಿತು.
ಶಾಸಕ ಸುರೇಶ್ ಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.
ಸ್ಥಳೀಯ ಶಾಸಕ ಡಾ. ಅಶ್ವತ್ಥನಾರಾಯಣ, ಹೋಮಿಯೊಪತಿ ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ್ ಬಿ. ಜೈನ್, ಡಾ. ಸುಧೀಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
‘ಮಕ್ಕಳ ವಿವಿಧ ರೀತಿಯ ನಡವಳಿಕೆಗೆ ಸಂಬಂಧಿಸಿದಂತೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಂದಿರಾ ನಗರದಲ್ಲಿ ಈಗಾಗಲೇ ನಮ್ಮ ಶಾಖೆ ಆರಂಭಗೊಂಡಿದ್ದು, ಮಲ್ಲೇಶ್ವರದಲ್ಲಿ ತೆಗೆದಿರುವ ಎರಡನೇ ಶಾಖೆ ಇದಾಗಿದೆ. ದೇಶದಲ್ಲಿ ಒಟ್ಟು ೧೨ ಶಾಖೆಗಳಿವೆ’ ಎಂದು ಚಿಕಿತ್ಸಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ್ ಬಿ. ಜೈನ್ ತಿಳಿಸಿದರು.