ಅದರಿಂದಾಗಿ ತಂತಿ ಕಡಿತಗೊಂಡ ಜಾಗವನ್ನು ಮೆಸ್ಕಾಂ ಸಿಬ್ಬಂದಿ ಹುಡುಕುತ್ತಾ ಹೋಗುವುದು, 10-15 ದಿನಗಳ ನಂತರ ಲೈನ್ ಸರಿಯಾಗಿ ‘ಕತ್ತಲಿನಿಂದ ಬೆಳಕಿನೆಡೆಗೆ’ ಎಂಬಂತೆ ದೀಪ ಉರಿಯುವುದು ಸಾಮಾನ್ಯ.
ಯಾವ ಮರ ಯಾವಾಗ ಬೀಳುತ್ತದೆ ಎಂದು ಊಹಿಸುವುದು ಕಷ್ಟವಾದರೂ, ವಿದ್ಯುತ್ ಲೈನ್ನ ಮಾರ್ಗದಲ್ಲಿ ಇರುವ ಒಣ ಮರಗಳನ್ನು ಮಳೆಗಾಲ ಪ್ರಾರಂಭವಾಗುವ ಮೊದಲೇ ಕಡಿಯುವುದು ಒಳ್ಳೆಯದು. ಇದರಿಂದ ಮೆಸ್ಕಾಂ ಸಿಬ್ಬಂದಿ ಮಳೆಗಾಲದಲ್ಲಿ ಹರಸಾಹಸಪಡುವುದು ಮತ್ತು ಸಾರ್ವಜನಿಕರು ಪರಿತಪಿಸುವುದು ತಪ್ಪುತ್ತದೆ.