ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟೆಕ್ಕಿಯ ಕೆನ್ನೆಗೆ ಹೊಡೆದು ದರೋಡೆ

ಆಟೊದಲ್ಲಿ ಕರೆದೊಯ್ದು ಕೃತ್ಯ
Last Updated 26 ನವೆಂಬರ್ 2014, 20:35 IST
ಅಕ್ಷರ ಗಾತ್ರ

ಬೆಂಗಳೂರು: ಆಟೊ ಚಾಲಕನೊಬ್ಬ ಮಧುಮಿತಾ ಎಂಬ ಸಾಫ್ಟ್‌ವೇರ್‌ ಎಂಜಿನಿಯರ್‌ ಕೆನ್ನೆಗೆ ಹೊಡೆದು ಚಿನ್ನಾಭರಣ ದೋಚಿರುವ ಘಟನೆ ಮೈಕೊಲೇಔಟ್‌ ಸಮೀಪದ ವಿಜಯಾ ಬ್ಯಾಂಕ್‌ ಲೇಔಟ್‌ನಲ್ಲಿ ಮಂಗಳವಾರ ನಡೆದಿದೆ.

ದೇವರಚಿಕ್ಕನಹಳ್ಳಿ ನಿವಾಸಿಯಾದ ಮಧುಮಿತಾ ಅವರು ಜೆ.ಪಿ.ನಗರ ಮೂರನೇ ಹಂತದ ಸಾಫ್ಟ್‌ವೇರ್‌ ಕಂಪೆನಿ­ಯಲ್ಲಿ ಉದ್ಯೋಗಿ­ಯಾಗಿದ್ದಾರೆ.

ಅವರು ಸಂಜೆ 5.30ರ ಸುಮಾರಿಗೆ ಮನೆಗೆ ಹೋಗಲು ಕಂಪೆನಿ ಬಳಿ ಆಟೊಗೆ ಹತ್ತಿದ್ದರು. ಅವರನ್ನು ಸ್ವಲ್ಪ ದೂರ ಕರೆದೊಯ್ದ ಚಾಲಕ ಮಾರ್ಗಮಧ್ಯೆ ಅಪರಿಚಿತ ವ್ಯಕ್ತಿಯನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದ. ಬಳಿಕ ಆತ ಆ ವ್ಯಕ್ತಿಯ ಜತೆ ಸೇರಿ ಮಧುಮಿತಾ ಅವರ ಕೆನ್ನೆಗೆ ಹೊಡೆದು 35 ಗ್ರಾಂ ಚಿನ್ನಾಭರಣ, ಮೊಬೈಲ್‌ ಮತ್ತು ಪರ್ಸ್‌ ಕಿತ್ತುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಆರೋಪಿಗಳು ಹುಳಿಮಾವು ಬಳಿಯ ದೊಡ್ಡಕಮ್ಮನಹಳ್ಳಿಯಲ್ಲಿ ಮಧುಮಿತಾ ಅವರನ್ನು ವಾಹನದಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ. ಮಧು­ಮಿತಾ, ತಮಿಳುನಾಡು ಮೂಲದ­ವರು. ಆರೋಪಿಗಳು ಹಾಗೂ ಅವರ ಆಟೊ ನೋಂದಣಿ ಸಂಖ್ಯೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಲೇಔಟ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT