ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಬೆದರಿಸಿ ಚಿನ್ನಾಭರಣ ಕಳವು

ಆಮಂತ್ರಣ ಪತ್ರಿಕೆ ಕೊಡುವ ಸೋಗಿನಲ್ಲಿ ಕೃತ್ಯ
Last Updated 28 ಜನವರಿ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ಮದುವೆಯ ಆಮಂತ್ರಣ ಪತ್ರಿಕೆ ಕೊಡುವ ಸೋಗಿ­ನಲ್ಲಿ ಮನೆಗೆ ಬಂದ ದುಷ್ಕರ್ಮಿಗಳು ಒಂದೂವರೆ ವರ್ಷದ ಮಗುವನ್ನು ಕೊಲ್ಲುವುದಾಗಿ ಬೆದರಿಸಿ ಹಣ ಹಾಗೂ ಚಿನ್ನಾಭರಣ ದೋಚಿರುವ ಘಟನೆ ಮಹದೇವಪುರ ಬಳಿಯ ಉದಯನಗರದಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ.

ಉದಯನಗರ ನಾಲ್ಕನೇ ಅಡ್ಡರಸ್ತೆ ನಿವಾಸಿ ಶಿವಕುಮಾರ್‌ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ₨ 8 ಸಾವಿರ ಮತ್ತು 68 ಗ್ರಾಂ ಚಿನ್ನಾಭರಣ ದೋಚಿದ್ದಾರೆ.

ಹವಾನಿಯಂತ್ರಣ ಉಪಕರಣಗಳ  ಅಳವಡಿಕೆಯ ಕೆಲಸ ಮಾಡುವ ಶಿವಕುಮಾರ್‌, ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಂದಿರಾನಗರಕ್ಕೆ ಹೋಗಿ­ದ್ದರು. ಈ ವೇಳೆ ಅವರ ಪತ್ನಿ ಸುಲೋಚನಾ, ಒಂದೂವರೆ ವರ್ಷದ ಮಗು ಮತ್ತು ಐದು ವರ್ಷದ ಮಗ ಮಾತ್ರ ಮನೆಯಲ್ಲಿದ್ದರು.

ಈ ಸಂದರ್ಭದಲ್ಲಿ ಶಿವಕುಮಾರ್‌ ಅವರ ಸ್ನೇಹಿತರೆಂದು ಹೇಳಿಕೊಂಡು ಮದುವೆಯ ಆಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಮನೆಗೆ ಬಂದಿದ್ದಾರೆ. ಸುಲೋಚನಾ ಅವರು ಆ ಇಬ್ಬರನ್ನು ನಡುಮನೆಯಲ್ಲಿ ಕೂರಿಸಿ, ಕುಡಿ­ಯುವ ನೀರು ತಂದು ಕೊಡಲು ಅಡುಗೆ ಕೋಣೆಗೆ ಹೋಗಿದ್ದರು. ಆಗ ಆರೋಪಿಗಳು ಸಮೀಪದಲ್ಲೇ ಆಟವಾ­ಡುತ್ತಿದ್ದ ಮಗುವಿನ ಕತ್ತಿಗೆ ಚಾಕು ಹಿಡಿದು, ಸುಲೋಚನಾ ಅವರು ಅಡುಗೆ ಕೋಣೆಯಿಂದ ಹೊರ ಬರು­ತ್ತಿದ್ದಂತೆ ಚಿನ್ನಾಭರಣ ಕೊಡುವಂತೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರಿಂದ ಗಾಬರಿಯಾದ ಸುಲೋಚನಾ ಅವರು ಸರ, ಎರಡು ಉಂಗುರ ಮತ್ತು ಅಲ್ಮೇರಾದಲ್ಲಿದ್ದ ಹಣವನ್ನು ಕೊಟ್ಟಿದ್ದಾರೆ. ನಂತರ ಆರೋಪಿಗಳು ಅವರನ್ನು ಮನೆಯೊ­ಳಗೆ ಕೂಡಿ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತನ ಕೃತ್ಯ
ಶಿವಕುಮಾರ್‌ ಅವರ ಸ್ನೇಹಿತ ಪ್ರಭಾಕರ್‌ ಎಂಬಾತ ತನ್ನ ಸಹಚರರ ಜತೆ ಸೇರಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತನಿಖೆಯಿಂದ ಗೊತ್ತಾಗಿದೆ. ಪ್ರಭಾಕರ್‌ ಸೇರಿ ದಂತೆ ಮೂವರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸ್ನೇಹಿತನ ಕೃತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT