ರಾಜ್ಯದಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲಿ ಅಕ್ಷರವಂತ ಮಹಿಳೆಯರೇ ಬಲಿಯಾಗುತ್ತಿರುವುದು ದುರಂತ.
ಇಂದು ಪುರುಷನಷ್ಟೇ ಮಹಿಳೆ ಸರಿಸಮಾನವಾಗಿ ಎಲ್ಲ ರಂಗಗಳಲ್ಲಿ ಸಾಧನೆ ಮೆರೆಯುತ್ತಿದ್ದರೂ, ಮಹಿಳೆಯರಲ್ಲಿ ಇನ್ನೂ ವೈಜ್ಞಾನಿಕ ಮನೋಭಾವ ಕೊರತೆ ಇರುವುದು ವಿಷಾದನೀಯ.
ಬೆಂಗಳೂರಿನಲ್ಲಿ ಈಚೆಗಷ್ಟೇ ಸಾಫ್ಟ್ವೇರ್ ಎಂಜಿನಿಯರ್ ಯುವತಿಯೊಬ್ಬಳು ಜ್ಯೋತಿಷಿ ಬಳಿ ಶಾಸ್ತ್ರ ಕೇಳಲು ಹೋಗಿ ಅತ್ಯಾಚಾರಕ್ಕೀಡಾಗಿರುವುದು ಇದಕ್ಕೆ ಒಂದು ಉದಾಹರಣೆ. ಇನ್ನಾದರೂ ಮಹಿಳೆಯರು ಇಂಥ ಮೂಢನಂಬಿಕೆಗಳಿಗೆ ಬಲಿಯಾಗದೇ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಹಾಗೂ ವೈಜ್ಞಾನಿಕವಾಗಿ ಯೋಚಿಸುವುದನ್ನು ಕಲಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಮಹಿಳೆಯರೇ ಜಾಗೃತರಾಗದ ಹೊರತು ಇಂಥ ಗೊಡ್ಡು ಶಾಸ್ತ್ರಗಳಿಂದ ಅವರಿಗೆ ಬಿಡುಗಡೆ ದೊರೆಯದು.