ಮಾಂಝಿ ಅವರು ವಾಸವಿರುವ ಬಂಗಲೆಯಲ್ಲಿ ನೂರಾರು ಮಾವಿನ ಮರಗಳು ಮತ್ತು ಲಿಚ್ಚಿ ಹಣ್ಣಿನ ಮರಗಳಿವೆ. ಈ ಮರಗಳಿಂದ ಮಾಂಝಿ ಕುಟುಂಬದವರು ಮತ್ತು ಬೆಂಬಲಿಗರು ಹಣ್ಣುಗಳನ್ನು ಕಿತ್ತು ತಿನ್ನದಂತೆ ಮತ್ತು ಕೆಳಕ್ಕೆ ಬಿದ್ದ ಹಣ್ಣುಗಳನ್ನು ತಿನ್ನದಂತೆ ನೋಡಿಕೊಳ್ಳಲು ನಿತೀಶ್ ಕುಮಾರ್ ಪೊಲೀಸ್ ಕಾವಲು ಹಾಕಿಸಿದ್ದಾರೆ ಎಂದು ರಿಜ್ವಾನ್ ಆರೋಪಿಸಿದ್ದಾರೆ.
ಮಾವಿನ ಮರಗಳ ಕಾವಲಿಗೆ 16 ಪೊಲೀಸರು ಮತ್ತು 8 ಜನ ಇನ್ಸ್ಪೆಕ್ಟರ್ಗಳನ್ನು ಸೇರಿದಂತೆ 24 ಜನ ಪೊಲೀಸರನ್ನು ನೇಮಿಸಲಾಗಿದೆ.
ನಿತೀಶ್ ಕುಮಾರ್ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ರಿಜ್ವಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಜೆಡಿಯು ಪಕ್ಷವನ್ನು ಬೆಂಬಲಿಸುತ್ತಿರುವ ಆರ್ಜೆಡಿ ಕೂಡ ನಿತೀಶ್ ಮೊದಲು ಜನರಿಗೆ ರಕ್ಷಣೆ ನೀಡಲಿ ಎಂದು ಟೀಕಿಸಿದೆ.