ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಮರೆತ ಬಿಜೆಪಿ: ಸೋನಿಯಾ ವ್ಯಂಗ್ಯ

Last Updated 21 ನವೆಂಬರ್ 2014, 10:17 IST
ಅಕ್ಷರ ಗಾತ್ರ

ಶ್ರೀನಗರ(ಐಎಎನ್‌ಎಸ್‌): ಪ್ರವಾಹದಿಂದ ತತ್ತರಿಸಿರುವ ಕಾಶ್ಮೀರದಲ್ಲಿ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಸೋನಿಯಾ ಗಾಂಧಿ ಹೇಳಿದ್ದಾರೆ.

ಉತ್ತರ ಕಾಶ್ಮೀರದ ಬಂದಿಪೋರ ಪಟ್ಟಣದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಕಾಶ್ಮೀರದ ಸಾವಿರಾರು ಜನ ನಿರ್ವಸತಿಗರಾಗಿದ್ದಾರೆ.

ಬಿಜೆಪಿ ಸರ್ಕಾರ ಪರಿಹಾರ ಮತ್ತು ಪುನರ್ವಸತಿ ಒದಗಿಸುವುದಾಗಿ  ಭರವಸೆ ನೀಡಿದ್ದು, ಇದು ಬರಿ ಮಾತಾಗಿಯೇ  ಉಳಿದಿದೆ. ಮಾತು ಉಳಿಸುಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದಿದ್ದಾರೆ.

‘ಕಾಶ್ಮೀರದ ಜತೆ ಕಾಂಗ್ರೆಸ್ ನೂರಾರು ವರ್ಷಗಳ ಸಂಬಂಧ ಹೊಂದಿದ್ದು ಈ ಬಾಂಧ್ಯವ್ಯವೇ ನನ್ನನ್ನು ಕಾಶ್ಮೀರಕ್ಕೆ ಕರೆ ತಂದಿದೆ’ ಎಂದು ಸೋನಿಯಾ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT