ಬೆಂಗಳೂರು: ಮಡಿವಾಳ ಮಾರುಕಟ್ಟೆ-ಯಲ್ಲಿ ಜೈವಿಕ ತ್ಯಾಜ್ಯವನ್ನು ಗೊಬ್ಬರ-ವನ್ನಾಗಿ ಪರಿವರ್ತಿಸುವ ಸ್ವಯಂಚಾಲಿತ ಜೈವಿಕ ತ್ಯಾಜ್ಯ ಸಂಸ್ಕರಣಾ ಯಂತ್ರಕ್ಕೆ ಸೋಮವಾರ ಪ್ರಾಯೋಗಿಕ ಚಾಲನೆ ನೀಡಲಾಯಿತು.
ಅರುಣ್ ಗ್ರೀನ್ ವೆಂಚರ್ಸ್ ಸಂಸ್ಥೆ-ಯು ಯಂತ್ರವನ್ನು ಅಭಿವೃದ್ಧಿಪಡಿಸಿದೆ. ದಿನಕ್ಕೆ 500 ಮನೆಗಳ 250 ಕೆ.ಜಿ.-ಗಳಷ್ಟು ಜೈವಿಕ ತ್ಯಾಜ್ಯವನ್ನು ಯಂತ್ರ ಸಂಸ್ಕರಣೆ ಮಾಡಲಿದೆ. 24 ಗಂಟೆ-ಗಳಲ್ಲಿ ಸಂಸ್ಕರಣೆ ಪ್ರಕ್ರಿಯೆ ಮುಗಿಯ-ಲಿದೆ. ಎಂಟು ದಿನಗಳ ಕಾಲ ಗೊಬ್ಬರ-ವನ್ನು ಶೇಖರಣೆ ಮಾಡಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಯಂತ್ರಕ್ಕೆ ಚಾಲನೆ ನೀಡಿ ಮಾತ-ನಾಡಿದ ಸಾರಿಗೆ ಸಚಿವ ರಾಮಲಿಂಗಾ-ರೆಡ್ಡಿ ‘ಈ ಯಂತ್ರವು ಜೈವಿಕ ತ್ಯಾಜ್ಯ-ವನ್ನು ಗೊಬ್ಬರವನ್ನಾಗಿ ಪರಿವರ್ತಿಸು-ತ್ತಿದೆ. ಇದರಿಂದ ಕಸ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆ ಆಗಲಿದೆ. ನೈಸರ್ಗಿಕ ಗೊಬ್ಬ--ರವನ್ನು ರೈತರಿಗೆ ಉಚಿತವಾಗಿ ನೀಡುವ ಯೋಚನೆ ಇದೆ’ ಎಂದರು.
‘ಪ್ರಾಯೋಗಿಕ ಯೋಜನೆಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಘಟಕದ ಸಾಮರ್ಥ್ಯವನ್ನು ಹಂತ–ಹಂತವಾಗಿ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.
‘ಮೊದಲು ಮಡಿವಾಳ ಮಾರುಕಟ್ಟೆ-ಯಲ್ಲಿ ಕೇವಲ 25 ಮಳಿಗೆಗಳು ಮಾತ್ರ ಇದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮಳಿಗೆಗಳ ಸಂಖ್ಯೆ ಹೆಚ್ಚಿದ್ದು, ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆದ್ದರಿಂದ 13ನೇ ಹಣಕಾಸು ಆಯೋ-ಗದ ನಗರಾಭಿವೃದ್ಧಿ ಯೋಜನೆ-ಯಡಿ-ಯಲ್ಲಿ ಮಾರುಕಟ್ಟೆಯನ್ನು ನವೀಕರಿ-ಸಲು ₨ 8 ಕೋಟಿ ಮೀಸಲಿಡಲಾಗಿದೆ’ ಎಂದು ಹೇಳಿದರು.
ಮೇಯರ್ ಬಿ.ಎಸ್. ಸತ್ಯನಾರಾ-ಯಣ, ‘ಈ ಯಂತ್ರವನ್ನು 30 ದಿನಗಳ ಕಾಲ ಮಡಿವಾಳದ ಮಾರುಕಟ್ಟೆಯಲ್ಲಿ ಪ್ರಾಯೋಗಿಕ ಬಳಕೆಗೆ ಇರಿಸಲಾಗು-ವುದು. ಯಂತ್ರವು ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ನಗರದ ಎಲ್ಲ ಮಾರುಕಟ್ಟೆಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು’ ಎಂದು ಹೇಳಿದರು.