ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿದಾರ ಹೆಸರು ಬಹಿರಂಗಕ್ಕೆ ನಕಾರ

ಸಿಬಿಐ ನಿರ್ದೇಶಕ ಸಿನ್ಹಾ ಮೇಲಿನ ಆರೋಪ
Last Updated 18 ಸೆಪ್ಟೆಂಬರ್ 2014, 19:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ, ‘2ಜಿ’ ಹಾಗೂ ಕಲ್ಲಿದ್ದಲು ಹಗರಣದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರು ನೀಡಿರುವ ಸರ್ಕಾರೇತರ ಸಂಸ್ಥೆಯು (ಎನ್‌ಜಿಒ)  ಈ ಅಕ್ರಮ ಬಯಲಿಗೆಳೆದ  ಸಾಮಾಜಿಕ ಕಾರ್ಯ­ಕರ್ತರ ಹೆಸರು ಬಹಿರಂಗಪಡಿಸಲು ನಿರಾಕರಿಸಿದೆ.

ಈ ದಾಖಲೆಗಳನ್ನು ಒದಗಿಸಿರುವವರ ಹೆಸರು ಬಹಿರಂಗಪಡಿಸಿದಲ್ಲಿ ಹಲವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ­ಯಿದೆ ಎಂದು ಸರ್ಕಾರೇತರ ಸಂಸ್ಥೆ ‘ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಷನ್‌’ (ಸಿಪಿಐಎಲ್‌) ಹೇಳಿದೆ.

ಹೀಗೆ ಹೆಸರು ಬಹಿರಂಗಪಡಿಸು­ವುದರಿಂದ ವಿಶ್ವಾಸ ದ್ರೋಹ ಮಾಡಿ­ದಂತಾಗುತ್ತದೆ. ಅಲ್ಲದೇ ಆ ವ್ಯಕ್ತಿಗಳು ದೈಹಿಕ, ಮಾನಸಿಕ ಹಿಂಸೆಗೆ  ಒಳಗಾಗುವ ಸಾಧ್ಯತೆ­ಯಿದೆ. ಈ ವಿಚಾರಕ್ಕೆ ಸಂಬಂಧಿ­ಸಿದಂತೆ ಬುಧವಾರ ಸಭೆ ಸೇರಿದ್ದ ‘ಸಿಪಿಐಎಲ್‌’ ಆಡಳಿತ ಮಂಡಳಿ ಸಭೆ­ಯಲ್ಲಿ ಹೆಸರು ಬಹಿರಂಗ­ಪಡಿಸ­ದಿರಲು ನಿರ್ಧರಿಸ­ಲಾಯಿತು ಎಂದು ‘ಸಿಪಿಐಎಲ್‌’ ಪರ ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂ­ಕೋರ್ಟ್‌ಗೆ ಗುರುವಾರ ತಿಳಿಸಿದರು.

ಬಿಹಾರ­ದಲ್ಲಿ ರಸ್ತೆ ಹಗರಣ ಬಯಲಿಗೆಳೆದು ಕೊಲೆಗೀಡಾದ ಸತ್ಯೇಂದ್ರ ದುಬೆ ಸೇರಿ­ದಂತೆ ಭ್ರಷ್ಟಾಚಾರ ಪ್ರಕರಣ­ಗಳನ್ನು ಬಹಿ­ರಂಗಪಡಿಸಿ ಹತ್ಯೆಗೆ ಒಳಗಾದ ಹಲವರ ಹೆಸರುಗಳನ್ನು ಭೂಷಣ್‌ ಉದಾಹರಿ­ಸಿದರು.
ಅಕ್ರಮ ಬಯಲಿಗೆಳೆಯುವವರ ಸುರ­ಕ್ಷತಾ ಕಾಯ್ದೆಯಲ್ಲಿಯೂ ಅಕ್ರಮಗಳ ಮಾಹಿತಿ ನೀಡುವವರ ಗುರುತು
ಬಹಿ­ರಂಗ­­ಪಡಿಸಬಾರದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT