ನವದೆಹಲಿ: ‘ಕರಾವಳಿ ನಿರ್ಬಂಧಿತ ವಲಯ’ (ಸಿಆರ್ಜೆಡ್) ವ್ಯಾಪ್ತಿಯಿಂದ ಮೀನುಗಾರರಿಗೆ ವಿನಾಯ್ತಿ ನೀಡುವ ಕುರಿತು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಭರವಸೆ ನೀಡಿದೆ.
ಮೀನುಗಾರರನ್ನು ಕರಾವಳಿ ನಿರ್ಬಂಧಿತ ವಲಯದಿಂದ ಹೊರ ಹಾಕಬಾರದೆಂಬ ಬೇಡಿಕೆ ತಮ್ಮ ಗಮನಕ್ಕೂ ಬಂದಿದೆ. ಸಣ್ಣಪುಟ್ಟ ಮೀನುಗಾರರ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪರಿಸರ ಇಲಾಖೆ ಸಚಿವ ಪ್ರಕಾಶ ಜಾವಡೇಕರ್ ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಆಶ್ವಾಸನೆ ನೀಡಿದ್ದಾರೆ.