ಚೆನ್ನೈ (ಪಿಟಿಐ): ಶ್ರೀಲಂಕಾ ನೌಕಾಪಡೆ ಮತ್ತೆ 11 ಮೀನುಗಾರರನ್ನು ಸಾಗರಮಧ್ಯದಲ್ಲಿ ಬಂಧಿಸುವ ಮೂಲಕ ಭಾರತೀಯ ಮೀನುಗಾರರ ಬಂಧನ ಕಾರ್ಯಾಚರಣೆಯನ್ನು ಮುಂದುವರಿಸಿದೆ.
ಹೀಗಾಗಿ ತಕ್ಷಣ ಮಧ್ಯಪ್ರವೇಶ ನಡೆಸಿ ಮೀನುಗಾರರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಗೆ ಪತ್ರ ಬರೆದು ಆಗ್ರಹಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಪುಟ್ಟುಕೊಟ್ಟೈನಿಂದ ಈ 11 ಮಂದಿಯನ್ನು ಮೀನುಗಾರಿಕಾ ದೋಣಿಯ ಸಹಿತ ವಶಕ್ಕೆ ತೆಗೆದುಕೊಂಡಿರುವುದಾಗಿ ವಿವರಿಸಿದ್ದಾರೆ.