ಮುಂಬೈ (ಐಎಎನ್ಎಸ್): ಜಾತಿ, ಧರ್ಮ ಮತ್ತು ಆಹಾರ ಪದ್ಧತಿಯ ಕಾರಣ ಸುಮಾರು ಎರಡು ದಶಕಗಳಿಂದ ತಮ್ಮ ಕನಸಿನ ಮನೆ ಪಡೆಯುವುದರಿಂದ ವಂಚಿತರಾದ ಸಮುದಾಯಗಳ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿದೆ.
ಈ ಸಮುದಾಯದವರು ಮನೆ ಖರೀದಿ ಮಾಡಲು ಅಥವಾ ಬಾಡಿಗೆ ಪಡೆಯಲು ಅಡ್ಡಿಯಾಗಿದ್ದ ಗೃಹ ನಿರ್ಮಾಣ ಸಂಘ ಮತ್ತು ಮನೆಗಳ ಮಾಲೀಕರಿಗೆ ವೃತ್ತಿ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ಹಿಂದಕ್ಕೆ ಪಡೆಯುವ ಕುರಿತು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಶುಕ್ರವಾರ ಠರಾವು ಪಾಸು ಮಾಡಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಾಲಿಕೆ ಸದಸ್ಯ ಸಂದೀಪ್ ದೇಶಪಾಂಡೆ ಪಾಲಿಕೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು.
ಗುಜರಾತಿ ಮತ್ತು ರಾಜಸ್ತಾನಿಗಳನ್ನು ಹೊರತುಪಡಿಸಿ ಮರಾಠಿಗರು, ದಕ್ಷಿಣ ಹಾಗೂ ಉತ್ತರ ಭಾರತೀಯರು ಸಾಂಪ್ರದಾಯಿಕ ಮಾಂಸಾಹಾರ ಸೇವಿಸುವವರ ಎನ್ನುವ ಕಾರಣಕ್ಕೆ ದಶಕದಿಂದ ಅವರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಖರೀದಿ ಅಥವಾ ಬಾಡಿಗೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.