ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಕಾಮಗಾರಿ ಜನರ ಪರದಾಟ

Last Updated 6 ಮಾರ್ಚ್ 2015, 19:48 IST
ಅಕ್ಷರ ಗಾತ್ರ

ನಗರದ ಕಬ್ಬನ್‌ಪೇಟೆಯ ಸಿದ್ದಣ್ಣ ಲೇನ್‌ನಲ್ಲಿ ನೀರಿನ ಪೈಪ್‌ ಅಳವಡಿಸಲು ಜಲಮಂಡಳಿಯವರು ಇಡೀ ರಸ್ತೆ ಅಗೆದಿದ್ದಾರೆ. ಈ ಕಾಮಗಾರಿ 15 ದಿನಗಳಿಂದ ನಡೆಯುತ್ತಲೇ ಇದೆ. ಕಲ್ಲು, ಮಣ್ಣು ಹಾಗೂ ಇತರ ಅವಶೇಷಗಳನ್ನು ರಸ್ತೆ ಮಧ್ಯೆಯೇ ರಾಶಿ ಹಾಕಿದ್ದಾರೆ. ತಂತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಾಯಕ್ಕೆಡೆ ಮಾಡಿಕೊಂಡುವಂತಿವೆ.

ಇದರಿಂದ ವಾಹನ ಸವಾರರು ಹಾಗೂ ಈ ಹಾದಿಯಲ್ಲಿ ತಿರುಗಾಡುವವರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಕಾಮಗಾರಿಯಿಂದಾಗಿ ಈ ಮಾರ್ಗದಲ್ಲಿರುವ ಕೆಲ ಅಂಗಡಿ­ಗಳನ್ನು ಕೂಡ ಮುಚ್ಚಲಾಗಿದೆ. ಶೀಘ್ರವೇ ಪೈಪ್‌ ಅಳವಡಿಸಿ ರಸ್ತೆ ಸರಿಪಡಿಸಬೇಕು ಎಂಬುದು ಸ್ಥಳೀಯರ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT