ನಗರದ ಕಬ್ಬನ್ಪೇಟೆಯ ಸಿದ್ದಣ್ಣ ಲೇನ್ನಲ್ಲಿ ನೀರಿನ ಪೈಪ್ ಅಳವಡಿಸಲು ಜಲಮಂಡಳಿಯವರು ಇಡೀ ರಸ್ತೆ ಅಗೆದಿದ್ದಾರೆ. ಈ ಕಾಮಗಾರಿ 15 ದಿನಗಳಿಂದ ನಡೆಯುತ್ತಲೇ ಇದೆ. ಕಲ್ಲು, ಮಣ್ಣು ಹಾಗೂ ಇತರ ಅವಶೇಷಗಳನ್ನು ರಸ್ತೆ ಮಧ್ಯೆಯೇ ರಾಶಿ ಹಾಕಿದ್ದಾರೆ. ತಂತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಾಯಕ್ಕೆಡೆ ಮಾಡಿಕೊಂಡುವಂತಿವೆ.
ಇದರಿಂದ ವಾಹನ ಸವಾರರು ಹಾಗೂ ಈ ಹಾದಿಯಲ್ಲಿ ತಿರುಗಾಡುವವರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಕಾಮಗಾರಿಯಿಂದಾಗಿ ಈ ಮಾರ್ಗದಲ್ಲಿರುವ ಕೆಲ ಅಂಗಡಿಗಳನ್ನು ಕೂಡ ಮುಚ್ಚಲಾಗಿದೆ. ಶೀಘ್ರವೇ ಪೈಪ್ ಅಳವಡಿಸಿ ರಸ್ತೆ ಸರಿಪಡಿಸಬೇಕು ಎಂಬುದು ಸ್ಥಳೀಯರ ಆಗ್ರಹ