ಕಾರ್ಕಳ: ಪುರಸಭೆಯ ನೌಕರರು ಹಾಗೂ ಪೌರಕಾರ್ಮಿಕರು ಜೆಸಿಟಿಯು ಅಖಿಲ ಭಾರತ ಮುಷ್ಕರ ಬೆಂಬಲಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಬುಧವಾರ ಪುರಸಭೆಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕ ಕಾನೂನನ್ನು ತಿರುಚಬಾರದು. ಪುರಸಭೆಯ ದಿನಗೂಲಿ ನೌಕರರ ವೇತನವನ್ನು ಹೆಚ್ಚಿಸಬೇಕು ಮತ್ತು ಸರ್ಕಾರದ ಆದೇಶದಂತೆ ಕಾಯಂ ಗೊಳಿಸಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ. ನಂತರ ಮನವಿಯನ್ನು ಮುಖ್ಯಾಧಿಕಾರಿ ಅವರಿಗೆ ನೀಡಲಾಯಿತು.
ಸುಜಿತ್, ಸಂತೋಷ್, ಹರೀಶ್, ಸುದರ್ಶನ್, ರಾಜೇಶ್, ರವೀಂದ್ರ, ಅನಿಲ್ ಕುಮಾರ್, ಗಣೇಶ್, ಉಮೇಶ್, ಸಂಜೀವ, ಪುನೀತ್, ಶಶೀತ್, ಜಯಕರ, ರವಿ ಸದಸ್ಯ ಮೊಹಮದ್ ಶರಿಫ್ ಹಾಗೂ ಕಾರ್ಮಿಕ ಸಂಘ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಹಲವು ಬೇಡಿಕೆಗಳನ್ನು ಮುಂದಿಟ್ಟು ಬುಧವಾರ ಕರೆ ನೀಡಿದ ಮುಷ್ಕರಕ್ಕೆ ನಗರದಲ್ಲಿ ಮುಷ್ಕರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಸ್ನಿಲ್ದಾಣದಲ್ಲಿ ಯಾವುದೇ ಬಸ್ಗಳು ಓಡಾಡದೇ ಬಸ್ನಿಲ್ದಾಣ ಬಿಕೋ ಎನ್ನುತ್ತಿದ್ದ ದೃಶ್ಯ ಎದ್ದು ಕಾಣುತ್ತಿತ್ತು. ಮುಷ್ಕರ ವಿಷಯ ತಿಳಿದಿದ್ದ ಶಿಕ್ಷಣ ಸಂಸ್ಥೆಗಳು ರಜೆಯನ್ನು ಘೋಷಿಸಿದ್ದವು.