ಸಾರಿಗೆ ನಿಗಮಗಳ ನೌಕರರ ಮುಷ್ಕರ ಭಾನುವಾರ ಮಧ್ಯರಾತ್ರಿಯಿಂದ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಬೆಂಗಳೂರಿನ ಎಷ್ಟೋ ಕಡೆ ಭಾನುವಾರ ಮಧ್ಯಾಹ್ನದಿಂದಲೇ ಬಸ್ಗಳು ಸಮಯಕ್ಕೆ ಸರಿಯಾಗಿ ಸಂಚರಿಸಲಿಲ್ಲ. ಮಧ್ಯಾಹ್ನ ಆಗುತ್ತಿದ್ದಂತೆಯೇ ಬಸ್ಗಳ ಸಂಖ್ಯೆ ಕ್ಷೀಣಿಸಿತು. ರಾತ್ರಿ ವೇಳೆಗೆ ಅವು ಸಂಚಾರವನ್ನೇ ಮರೆತವು.
ಇದರಿಂದಾಗಿ, ಬೆಂಗಳೂರಿನ ಒಳಗೆ ಸಂಚರಿಸ ಬೇಕಾದವರು ಮಾತ್ರವಲ್ಲದೆ ಹೊರಗೆ ತೆರಳಬೇಕಾದವರೂ ತೊಂದರೆಪಡುವಂತಾಯಿತು. ಸಾರಿಗೆ ನೌಕರರಿಗೆ ಪ್ರಯಾಣಿಕರು ಹಿಡಿಶಾಪ ಹಾಕಿಕೊಂಡರು. ಅನಿವಾರ್ಯವಾಗಿ ಆಟೊದಲ್ಲಿ ಅವರು ಕೇಳಿದಷ್ಟು ಹಣ ಕೊಟ್ಟು ಹೋಗುವಂತಾಯಿತು. ಈ ನಡೆ ಖಂಡನಾರ್ಹ.