ಪ್ರೊ.ಕೆ.ಎಸ್. ನಾಗಪತಿಯವರು ಬರೆದ ‘ರಾಜಧಾನಿಯಿಂದ ಮೈಸೂರಿಗೆ ಮೇಲ್ಸೇತುವೆ’ ಲೇಖನಕ್ಕೆ (ಸಂಗತ ಆ. ೧೨) ಪ್ರತಿಕ್ರಿಯೆ. ಈ ಯೋಜನೆಯತ್ತ ಕರ್ನಾಟಕ ಸರ್ಕಾರ ತನ್ನ ಗಮನವನ್ನು ಹರಿಸುವುದು ಅತ್ಯಗತ್ಯ. ಪ್ರೊ. ನಾಗಪತಿಯವರು ಈ ಯೋಜನೆಯನ್ನು ಒಂದು ಕನಸಿನ ರೂಪದಲ್ಲಿ ಕಾಣಿಸದೆ, ಜಾರಿಗೆ ಯೋಗ್ಯ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ.
ಅಂಕಿ, ಅಂಶಗಳ ಸಮೇತ ಅದಕ್ಕೆ ಆಗಬಹುದಾದ ವೆಚ್ಚ, ಆ ವೆಚ್ಚದ ಹಣವನ್ನು ಮರಳಿ ಪಡೆಯುವ ವಿಧಾನ, ಅದರಿಂದ ಜನರಿಗಾಗುವ ಪ್ರಯೋಜನ, ತೊಡಕುಗಳ ನಿವಾರಣೆ ಒಳಗೊಂಡಂತೆ ಹೇಗೆ ಇದನ್ನು ನನಸಾಗಿಸಬಹುದು ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.
ಬೆಂಗಳೂರು–ಮೈಸೂರು ನಡುವೆ ಈಗಿನ ಚತುಷ್ಪಥ ರಸ್ತೆಯನ್ನು ಆರು ಅಥವಾ ಎಂಟು ಪಥವಾಗಿ ವಿಸ್ತರಿಸ ಬೇಕೆಂದು ಲೋಕೋಪಯೋಗಿ ಸಚಿವರು ಚಿಂತಿಸುತ್ತಿರುವ ಈ ಕಾಲ ಘಟ್ಟದಲ್ಲಿ ಇಂತಹ ಸಲಹೆಗಳ ಕುರಿತು ವಿಶೇಷವಾದ ಚಿಂತನ ಮಂಥನದ ಅವಶ್ಯಕತೆಯಿದೆ.
–ಡಾ.ಕೆ.ಚಿದಾನಂದ ಗೌಡ, ಮೈಸೂರು