ನವದೆಹಲಿ(ಪಿಟಿಐ): ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದಂತೆ ಮೇ 24ರಂದು ಕೋರ್ಟ್ಗೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ‘ಆಮ್ ಆದ್ಮಿ ಪಕ್ಷ’ದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ಹಾಗೂ ಪಕ್ಷದ ಇನ್ನಿತರ ಮೂವರು ಸದಸ್ಯರಿಗೆ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಲಯ ಶುಕ್ರವಾರ ಎಚ್ಚರಿಕೆ ನೀಡಿದೆ.
ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಪುತ್ರ, ವಕೀಲ ಅಮಿತ್ ಸಿಬಲ್ ಅವರು ಕೇಜ್ರಿವಾಲ್, ಮನಿಷ್ ಸಿಸೋಡಿಯಾ, ಪ್ರಶಾಂತ್ ಭೂಷಣ್ ಹಾಗೂ ಶಾಜಿಯಾ ಇಲ್ಮಿ ವಿರುದ್ಧ ಮಾನನಷ್ಟ ದಾವೆ ಹೂಡಿದ್ದರು.
‘ನ್ಯಾಯಾಲಯದ ವ್ಯಾಜ್ಯಗಳಲ್ಲಿ ದೂರಸಂಪರ್ಕ ಸಂಸ್ಥೆ ಯೊಂದರ ಪರವಾಗಿ ವಾದ ಮಾಡಲು ಅಮಿತ್್ ಅವರು ತಮ್ಮ ತಂದೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿ ದ್ದಾರೆ’ ಎಂದು ‘ಎಎಪಿ’ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್, ಮಾನನಷ್ಟ ಮೊಕದ್ದಮೆ ದಾಖಲಿಸಿ ದ್ದರು. ‘ಮುಂದಿನ ವಿಚಾರಣೆ ದಿನ ಕಕ್ಷಿದಾರರು ಕೋರ್ಟ್್ ಮುಂದೆ ಹಾಜರಾಗುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ನ್ಯಾಯಾಧೀಶ ಸುನಿಲ್್ ಕುಮಾರ್್ ಶರ್ಮಾ ಅವರು ‘ಎಎಪಿ’ ಪರ ವಕೀಲ ರಾಹುಲ್್ ಮೆಹ್ರಾ ಅವರಿಗೆ ಎಚ್ಚರಿಸಿದರು.