ಗಂಗಾವತಿ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಗಿಣಿಗೇರಾ–- ಗದ್ವಾಲ್ ಮಾರ್ಗದ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗೆ ಅರಣ್ಯ ಇಲಾಖೆ ಜಮೀನಿನ ಮೊರಮ್ನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಟಿಪ್ಪರನ್ನು ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ಲಿಂಗದಳ್ಳಿ ಗ್ರಾಮದ ಅರಣ್ಯ ಭೂಮಿಯಲ್ಲಿ ಸುಮಾರು ಏಳು ಕ್ಯೂಬಿಕ್ ಘನ ಮೀಟರ್ ಮರಮ್ ಅಗೆದು ಸಾಗಿಸಲಾಗಿದ್ದು, ಈ ಸಂಬಂಧ ಮಹೇಶ ಸೇರಿ ಇಬ್ಬರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಜು. 21ರಂದು ಟಿಪ್ಪರ್ ವಶಕ್ಕೆ ಪಡೆದಿದ್ದರೂ, ಪ್ರಕರಣ ದಾಖಲಿಸರಲಿಲ್ಲ. ಇಲಾಖೆ ಅಧಿಕಾರಿ ವಿರುದ್ಧ ಈ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ ಗ್ರಾಮದ ಮೂಕಪ್ಪ ತಿಳಿಸಿದ್ದಾರೆ.
ಗಂಗಾವತಿ ವಲಯ ಅರಣ್ಯಾಧಿಕಾರಿ ಗುರನಗೌಡ ಆರೋಪ ನಿರಾಕರಿಸಿದ್ದು, ಅಕ್ರಮಕ್ಕೆ ಅವಕಾಶ ನೀಡದ ಕಾರಣ ಆರೋಪ ಮಾಡಲಾಗಿದೆ ಎಂದರು.