ತಿರುವನಂತಪುರ(ಪಿಟಿಐ): ನಿಜವಾದ ದೇಶಭಕ್ತರಾದವರು, ರಕ್ಷಣಾ ಪಡೆಯ ಸ್ಥೈರ್ಯಗೆಡಿಸುವ ಮತ್ತು ಆ ಮೂಲಕ ಶತ್ರುಗಳಿಗೆ ಸಹಾಯ ಮಾಡುವ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ರಕ್ಷಣ ಸಚಿವ ಎ.ಕೆ. ಆಂಟನಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತಿಗೆ ತಿರುಗೇಟು ನೀಡಿದ್ದಾರೆ
ಶನಿವಾರ ಪತ್ರಕರ್ತರೊಂದಿ ಮಾತನಾಡಿದ ಆಂಟನಿ, ‘ಮೋದಿ ಅವರ ಈ ರೀತಿಯ ಹೇಳಿಕೆ ಇಡೀ ರಕ್ಷಣಾ ಪಡೆಯನ್ನೇ ಎದೆಗುಂದಿಸುತ್ತದೆ. ಕೇವಲ ಕೀಳುಮಟ್ಟದ ಜನಪ್ರಿಯತೆಗಾಗಿ ನೀಡುವ ಇಂತಹ ಹೇಳಿಕೆಯನ್ನು ಯಾವ ದೇಶಪ್ರೇಮಿಯೂ ಸಹಿಸುವುದಿಲ್ಲ’ ಎಂದು ಮೋದಿ ಅವರಿಗೆ ಚಾಟಿ ಬೀಸಿದ್ದಾರೆ.
ಪಾಕ್ ಸೇನಾ ಸಮವಸ್ತ್ರದಲ್ಲಿದ್ದ ಮಂದಿ ಬಂದು ನಮ್ಮ ಸೈನಿಕರ ಶಿರಚ್ಛೇದ ಮಾಡಿದರು ಎಂದು ಆಂಟನಿ ಸಂಸತ್ನಲ್ಲಿ ನೀಡಿದ ಹೇಳಿಕೆಗೆ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘ಕಾಶ್ಮೀರ ಮತ್ತು ಭಾರತದ ಪ್ರದೇಶಗಳ ಶಾಂತಿ ಕದಡಲು 3‘ಎ.ಕೆ’ಗಳು ಸಾಕು ಎಂದು ಆರೋಪಿಸಿದ್ದರು.