ಮೋದಿ ಅವರ ಈ ಮಾತಿಗೆ ಪ್ರತ್ಯುತ್ತರ ನೀಡಿರುವ ಶಿವಸೇನಾ, ‘ಬಾಳಾ ಠಾಕ್ರೆ ಅವರ ಬಗ್ಗೆ ಅವರ (ಮೋದಿ) ಹೃದಯದಲ್ಲಿ ಗೌರವವಿರುವುದನ್ನು ತಿಳಿದು ಸಂತೋಷವಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ 25 ವರ್ಷಗಳ ಬಿಜೆಪಿ– ಶಿವಸೇನಾ ಮೈತ್ರಿ ಮುರಿದಿದ್ದೇಕೆ? ಮೈತ್ರಿ ಮುರಿದ ಮೇಲೆ ಠಾಕ್ರೆ ಅವರ ಮೇಲಿನ ನಿಮ್ಮ ಗೌರವ ಎಲ್ಲಿದೆ?’ ಎಂದಿದೆ.
‘ಒಂದು ವೇಳೆ ಮೈತ್ರಿಯ ಬಗ್ಗೆ ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರೆ ಅದು ಬಹುಶಃ ಅದು ಠಾಕ್ರೆ ಅವರಿಗೆ ಅಪೂರ್ವ ಗೌರವ ಸಲ್ಲಿಸಿದಂತಾಗುತ್ತಿತ್ತು. ಇದಲ್ಲದೆ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ಛತ್ರಪತಿ ಶಿವಾಜಿ ಅವರ ಬಗ್ಗೆ ಇನ್ನಿಲ್ಲದ ಒಲವು ತೋರುತ್ತಿದ್ದಾರೆ. ಜೀವಮಾನದಲ್ಲಿ ಒಮ್ಮೆಯೂ ಶಿವಾಜಿ ಜಯಂತಿ ಆಚರಿಸದ ಅವರಿಗೆ ಶಿವಾಜಿ ಬಗ್ಗೆ ಈಗ ಎಲ್ಲಿಲ್ಲದ ಪ್ರೀತಿ ಮೂಡಿದೆ. ಇದು ರಾಯ್ಗಢ ಕೋಟೆಯಲ್ಲಿರುವ (ಶಿವಾಜಿ ಸಮಾಧಿ ಸ್ಥಳ) ಶಿವಾಜಿ ಆತ್ಮಕ್ಕೂ ಇರಿಸುಮುರಿಸು ತರುವಂಥದ್ದು’ ಎಂದು ‘ಸಾಮ್ನಾ’ ಕಿಡಿಕಾರಿದೆ.