ಮೊದಲ ಯತ್ನದಲ್ಲೇ ಎರಡನೇ ರ್ಯಾಂಕ್ ಪಡೆದಿರುವ ರೇಣು, ‘ಫಲಿತಾಂಶ ನೋಡಿ ನನಗೆ ತುಂಬಾನೇ ಸಂತೋಷವಾಗಿದೆ.ಕಳೆದೊಂದು ವರ್ಷದಿಂದ ನಾನು ಪರೀಕ್ಷೆಗೆ ಸಿದ್ಧತೆ ನಡೆಸಿದ್ದೆ’ ಎಂದು ತಿರುವನಂತಪುರಂನಿಂದ ಪ್ರತಿಕ್ರಿಯಿಸಿದರು. ಮೂಲತಃ ಕೊಟ್ಟಾಯಂನವರಾದ ರೇಣು ರಾಜ್, ಪ್ರಸ್ತುತ ಕೇರಳದ ಕೊಲ್ಲಂನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.