ತಾರೆ ನಿರ್ಗಮಿಸಿದ ಬೆನ್ನಲ್ಲೇ, ಸೂರ್ಯಕುಮಾರ್ ಯಾದವ್ 36 ರನ್ ಗಳಿಸಿ ಔಟಾದರು. ಪಾಟೀಲ್ ಶೂನ್ಯಕ್ಕೆ ವಿನಯ್ ಕುಮಾರ್ಗೆ ಬಲಿಯಾದರು. ಮುಂಬೈ ದಿನದ ಆಟದ ಅಂತ್ಯಕ್ಕೆ 277ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಕರ್ನಾಟಕ ಪರ ಮಿಥುನ್ 3 ವಿಕೆಟ್, ವಿನಯ್, ಅರವಿಂದ್, ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು. ಸಿದ್ದಾರ್ಥ್ ಲಾಡ್ (41) ಮತ್ತು ಅಭಿಷೇಕ್ ನಾಯರ್ (02) ಕ್ರೀಸ್ ಕಾಯ್ದುಕೊಂಡಿದ್ದಾರೆ.