‘ರಷ್ಯಾಗೆ ಹೋಗುವುದಕ್ಕಾಗಿ ಶಾಸಕ ಸತೀಶ ಜಾರಕಿಹೊಳಿ ಅವರು ₹50 ಸಾವಿರ ನೀಡಿದರೆ, ಸುಲ್ತಾನ್ಪುರ ಪಂಚಾಯಿತಿಯಿಂದ ₹20 ಸಾವಿರ ಆರ್ಥಿಕ ನೆರವು ಸಿಕ್ಕಿತ್ತು. ಬ್ಯಾಂಕ್ನಲ್ಲಿ ₹ 70 ಸಾವಿರ ಸಾಲ ಮಾಡಿದೆ’ ಎಂದರು.
‘ಈ ಹಿಂದೆ ನವದೆಹಲಿಯಲ್ಲಿ ನಡೆದ ಎಸ್ಜಿಪಿಐ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದೆ. ಹೈದರಾಬಾದ್ನಲ್ಲಿ ನಡೆದ ಕೂಟದಲ್ಲಿ 3ನೇ ಬಹುಮಾನ ಪಡೆದಿದ್ದೆ’ ಎಂದೂ ಮಾಹಿತಿ ನೀಡಿದರು.
ಅಭಿನಂದನೆ: ಹುಸೇನ್ ಅವರನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎನ್. ಜಯರಾಮ್ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಬಗಾದಿ ಗೌತಮ್ ಅಭಿನಂದಿಸಿದರು.