ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲ, ಈಜುಕೊಳ!

ಕುಂದುಕೊರತೆ
Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಯಶವಂತಪುರದ ರಾಘವೇಂದ್ರ ಕಾಲೋನಿ ಬಳಿ ಇರುವ ಪೈಪ್‌ಲೈನ್‌ ರಸ್ತೆಯ ಅವ್ಯವಸ್ಥೆ ಹೇಳತೀರದು. ಈ ರಸ್ತೆಯಲ್ಲಿರುವ ಗುಂಡಿಗಳ ಸಂಖ್ಯೆ ಅಗಣಿತ. ಮಳೆಗಾಲದಲ್ಲಿ ಇಡೀ ರಸ್ತೆಯೇ ಸ್ವಿಮ್ಮಿಂಗ್‌ಪೂಲ್‌ ಆಗುತ್ತದೆ. ಮಂಡಿವರೆಗೂ ನೀರು ನಿಲ್ಲುತ್ತದೆ. ಈ ರಸ್ತೆಯ ದುರವಸ್ಥೆಯನ್ನು ಶಾಸಕರ ಗಮನಕ್ಕೆ ತಂದರೂ ಏನೇನೂ ಉಪಯೋಗವಾಗಿಲ್ಲ.

ಸಾಮಾನ್ಯ ದಿನಗಳಲ್ಲೂ ಈ ರಸ್ತೆಯಲ್ಲಿ ಸಂಚಾರ ಕಷ್ಟಕರ. ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರೇ ತಮ್ಮ ಸುರಕ್ಷತೆ ನೋಡಿಕೊಳ್ಳಬೇಕಿದೆ. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಲು ಇಟ್ಟಿಗೆ, ಮಣ್ಣು ತುಂಬಿ ಸಾರ್ವಜನಿಕರು ಕಷ್ಟಪಟ್ಟಿದ್ದೂ ಇದೆ. ಆದರೆ, ಮಳೆಗಾಲದಲ್ಲಿ ಮತ್ತದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಅಂದಹಾಗೆ, ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಿದ್ದರೂ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ರಸ್ತೆಯಲ್ಲಿ ದೊಡ್ಡದೊಂದು ಅವಘಡ ಸಂಭವಿಸುವವರೆಗೂ ಕಾರ್ಯಪ್ರವೃತ್ತರಾಗಬಾರದು ಎಂಬ ದೃಢ ನಿಶ್ಚಯ ಮಾಡಿಕೊಂಡಿದ್ದಾರೋ ಏನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT